Monday, May 13, 2024
Homeಕರಾವಳಿಬೆಳ್ತಂಗಡಿ: 50ಕ್ಕೂ ಹೆಚ್ಚು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ ಮಹಾತಾಯಿಗೆ ಅಮಾನುಷವಾಗಿ ಹಲ್ಲೆ ನಡೆಸಿದ ಪಾಪಿ ಮಗ!

ಬೆಳ್ತಂಗಡಿ: 50ಕ್ಕೂ ಹೆಚ್ಚು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ ಮಹಾತಾಯಿಗೆ ಅಮಾನುಷವಾಗಿ ಹಲ್ಲೆ ನಡೆಸಿದ ಪಾಪಿ ಮಗ!

spot_img
- Advertisement -
- Advertisement -

ಬೆಳ್ತಂಗಡಿ: ಸದ್ಯ ಇಳಿವಯಸ್ಸಿನಲ್ಲಿರುವ ಹೆತ್ತ ತಾಯಿಗೆ ಮಗ ಮತ್ತು ಮೊಮ್ಮಗ ಕಂಠ ಪೂರ್ತಿ ಕುಡಿದು ಅಮಾನೂಷವಾಗಿ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಹಲಸಿನಕಟ್ಟೆ ಎಂಬಲ್ಲಿ ನಡೆದಿದೆ.

ಹಲಸಿನಕಟ್ಟೆಯ 5 ಸೆನ್ಸ್ ಕಾಲನಿಯ ನಿವಾಸಿ ಶ್ರೀನಿವಾಸ ಶೆಟ್ಟಿ, ಮತ್ತು ಅವನ ಮಗ ಪ್ರದೀಪ ಶೆಟ್ಟಿ ಸೇರಿಕೊಂಡು ವಯೇೂವೃದ್ದ ಮಹಿಳೆ ಅಪ್ಪಿ ಶೆಡ್ತಿಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಅನಾರೋಗ್ಯದಿಂದಾಗಿ ಹಲವು ವರ್ಷಗಳಿಂದ ಅಪ್ಪಿ ಶೆಡ್ತಿ ಮಲಗಿದ್ದಲ್ಲೇ ಇದ್ದಾರೆ. ಪ್ರತಿ ದಿನವೂ ಮಗ ಮತ್ತು ಮೊಮ್ಮಗ ಕುಡಿದು ಬಂದು ವಯೋವೃದ್ಧೆಗೆ ಮನಸೋ ಇಚ್ಛೆ ಥಳಿಸುತ್ತಿದ್ದರು ಎನ್ನಲಾಗಿದೆ.

ಅಜ್ಜಿಗೆ ಪ್ರತಿದಿನವೂ ಆಗುತ್ತಿರುವ ಹಲ್ಲೆಯಿಂದ ಬೇಸರಗೊಂಡ ಮತ್ತೊಬ್ಬ ಮೊಮ್ಮಗ ಇಂದು ಅಜ್ಜಿಗೆ ನೀಡುವ ಹಿಂಸೆಯನ್ನು ತನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ವಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದಾನೆ.ಕೂಡಲೇ ವಿಡಿಯೋ ಗಮನಿಸಿ ಈ ಬಗ್ಗೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡ ಬೆಳ್ತಂಗಡಿ ಠಾಣಾ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಕಲಂ:323, 504 IPC & 24 senior citizen act 2007ರಂತೆ ಪ್ರಕರಣ ದಾಖಲಿಸಲಾಗಿದೆ

ಖ್ಯಾತ ಸೂಲಗಿತ್ತಿ ಈ ಅಪ್ಪಿ ಶೆಡ್ತಿ:
ಅನ್ಯಾಯಕ್ಕೆ ಒಳಗಾದ ವಯೋವ್ರದ್ದೆ ಇವರು ಸವಣಾಲು ಗ್ರಾಮದಲ್ಲಿ ಎಲ್ಲಾರಿಗೂ ಚಿರಪರಿಚಿತ ಯಾಕೆಂದರೆ ಹಿಂದಿನ ಕಾಲದಲ್ಲಿ ಸವಣಾಲಿನಿಂದ ಬೆಳ್ತಂಗಡಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿದ್ದಾಗ, ಗ್ರಾಮದಲ್ಲಿ ಯಾರೇ ಹೆಂಗಸರು ಗರ್ಭಿಣಿಯರು ಆದರೆ ಹೆರಿಗೆಗೆ ನಮ್ಮ ಅಪ್ಪಿ ಅಜ್ಜಿಯೆ ಬರಬೇಕು ಎಂದು ಒತ್ತಾಯ ಮಾಡುತ್ತಿದ್ದರು.

ಪ್ರಾಥಮಿಕ ಮಾಹಿತಿಯ ಪ್ರಕಾರ ಸರಿ ಸುಮಾರು 50ಕ್ಕೂ ಮಿಕ್ಕಿ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸಿದ ಕೀರ್ತಿ ಈ ಅಪ್ಪಿ ಶೆಡ್ತಿಯವರಿಗೆ ಸಲ್ಲಬೇಕು.

- Advertisement -
spot_img

Latest News

error: Content is protected !!