- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ಸವಣಾಲು ಗ್ರಾಮದ ಹಲಸಿನಕಟ್ಟೆ ಐದು ಸೆನ್ಸ್ ನ ನಿವಾಸಿ ಶ್ರೀನಿವಾಸ ಶೆಟ್ಟಿ ಮತ್ತು ಅವನ ಮಗ ಪ್ರದೀಪ ಶೆಟ್ಟಿ ಕಂಠಪೂರ್ತಿ ಕುಡಿದು ವಯೇೂವೃದ್ದ ಮಹಿಳೆ ಅಪ್ಪಿ ಶೆಡ್ತಿಯವರ ಮೇಲೆ ನಡೆಸಿರುವ ಘಟನೆಯ ಬಗ್ಗೆ ಬೆಳ್ತಂಗಡಿ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಕುರಿತ ತುರ್ತು ಸಭೆಯ ಕಾರಣದಿಂದಾಗಿ ಶಾಸಕರು ಸದ್ಯ ಬೆಂಗಳೂರಿನಲ್ಲಿದ್ದು, ಹಾಗಾಗಿ ವೃದ್ಧೆಯ ಮನೆಗೆ ಭೇಟಿ ನೀಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಮತ್ತು ಪೊಲೀಸರನ್ನು ವೃದ್ಧೆಯ ಮನೆಗೆ ಕಳುಹಿಸಿ ಅಜ್ಜಿಯ ಅರೋಗ್ಯ ಕ್ಷೇಮಕ್ಕೆ ಬೇಕಾಗುವ ತುರ್ತು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
- Advertisement -