- Advertisement -
- Advertisement -
ಉಡುಪಿ: ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ-ಟ್ವೆಂಟಿ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದ ಹಿನ್ನಲೆಯಲ್ಲಿ ಬೀಚ್ ನಲ್ಲಿ ಮರಳು ಕಲಾಕೃತಿ ರಚಿಸಿ ಶುಭ ಹಾರೈಸಲಾಗಿದೆ.
ಉಡುಪಿಯ ಸ್ಯಾಂಡ್ ಆರ್ಟ್ ತಂಡ ಜೈ ಹೋ ಇಂಡಿಯಾ ಎಂಬ ಮರಳು ಕಲಾಕೃತಿಯನ್ನು ಕುಂದಾಪುರ ತಾಲೂಕಿನ ಕೋಟೇಶ್ವರ ಬೀಚ್ ನಲ್ಲಿ ಭಾರತ ಕ್ರಿಕೆಟ್ ತಂಡದ ಗೆಲುವಿಗೆ ಶುಭ ಹಾರೈಸಿದ್ದಾರೆ.
ಸ್ಯಾಂಡ್ ಆರ್ಟ್ ತಂಡದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆ ಈ ಕಲಾಕೃತಿಯನ್ನು ರಚಿಸಿದ್ದಾರೆ.
ಸುಮಾರು ಐದು ಗಂಟೆಗಳ ಕಾಲದ ಅವಧಿಯಲ್ಲಿ ಈ ಕಲಾಕೃತಿಯನ್ನು ರಚನೆ ಮಾಡಲಾಗಿದೆ.
- Advertisement -