ಬೆಳ್ತಂಗಡಿ; ರಬ್ಬರ್ ಗೆ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಕೆ ಎಸ್ ಎಂ ಸಿ ಎ ಹಾಗೂ ಬೆಳ್ತಂಗಡಿ ತಾಲೂಕು ರಬ್ಬರ್ ಸೊಸೈಟಿಯ ಪದಾಧಿಕಾರಿಗಳು ತೋಟಗಾರಿಕಾ ಸಚಿವರಾದ ಸಚಿವ ಮುನಿರತ್ನ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಇದೇ ವೇಳೆ ರಬ್ಬರ್ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೇರಳ ರಾಜ್ಯದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಬೆಂಬಲ ಬೆಲೆ ಘೋಷಿಸುವಂತೆ ಮನವಿ ಸಲ್ಲಿಸಲಾಯಿತು.
ಈ ವೇಳೆ ರಬ್ಬರ್ ಸೊಸೈಟಿಯ ಅಧ್ಯಕ್ಷರಾದ ಶ್ರೀಧರ್ ಭಿಡೆ,ಉಪಾಧ್ಯಕ್ಷರಾದ ಅನಂತ್ ಭಟ್ ಮಚ್ಚಿಮಲೆ, ನಿರ್ದೇಶಕರಾದ ಪದ್ಮ ಗೌಡ ರಬ್ಬರ್ ಸೊಸೈಟಿ ಸಿ ಇ ಓ ಶ್ರೀ ರಾಜು ಶೆಟ್ಟಿ ಬೆಂಗತ್ಯರ್, ಕೆ ಎಸ್ ಎಂ ಸಿ ಎ ನಿರ್ದೇಶಕರಾದ ವಂದನೀಯ ಶಾಜಿ ಮಾತ್ಯು, ಕೆ ಎಸ್ ಎಂ ಸಿ ಎ ಅಧ್ಯಕ್ಷರಾದ ಶ್ರೀ ಬಿಟ್ಟಿ ನೆಡುನಿಲಂ, ಕೆ ಎಸ್ ಎಂ ಸಿ ಎ ಪ್ರಧಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ ಜೆ, ಕೆ ಎಸ್ ಎಂ ಸಿ ಎ ಸದಸ್ಯರಾದ ಶ್ರೀ ಸೇಬಾಸ್ಟಿನ್ ಪಿ ಸಿ ಅವರು ಜೊತೆಗಿದ್ದರು.