Wednesday, May 8, 2024
Homeತಾಜಾ ಸುದ್ದಿಸಿಪಿಎಂ ಕಾರ್ಯಕರ್ತರಿಂದ ಆರ್‌ಎಸ್‌ಎಸ್ ಕಾರ್ಯಕರ್ತನೋರ್ವನ ಹತ್ಯೆ: ಆರ್‌ಎಸ್‌ಎಸ್ ಕಚೇರಿಯ ಬಾಂಬ್ ದಾಳಿ ಪ್ರಕರಣದಲ್ಲಿ ಇಬ್ಬರು ಅಂದರ್

ಸಿಪಿಎಂ ಕಾರ್ಯಕರ್ತರಿಂದ ಆರ್‌ಎಸ್‌ಎಸ್ ಕಾರ್ಯಕರ್ತನೋರ್ವನ ಹತ್ಯೆ: ಆರ್‌ಎಸ್‌ಎಸ್ ಕಚೇರಿಯ ಬಾಂಬ್ ದಾಳಿ ಪ್ರಕರಣದಲ್ಲಿ ಇಬ್ಬರು ಅಂದರ್

spot_img
- Advertisement -
- Advertisement -

ಕಣ್ಣೂರು: ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಸಿಪಿಎಂ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನೋರ್ವ ಅಸುನೀಗಿದ್ದಾನೆ

ಈ ಘಟನೆಯು ಕಣ್ಣೂರಿನ ಪಿಣರೈ ಪನುಂಡದಲ್ಲಿ ನಡೆದಿದ್ದು, ಗುರು ಪೂಜಾ ಉತ್ಸಹ ಮುಗಿಸಿಕೊಂಡು ಹಿಂತಿರುಗುತ್ತಿದ್ದ ವೇಳೆಯಲ್ಲಿ ಜಿಮ್ನೇಶ್ ಮತ್ತು ಅವನ ಸಹಚರರ ಮೇಲೆ ಕಮ್ಯೂನಿಸ್ಟ್ ಗೂಂಡಾಗಳು ಹಲ್ಲೆ ನಡೆಸಿದ್ದಾರೆ.

ಗುರುಪೂಜಾ ಉತ್ಸವವನ್ನು ಮುಗಿಸಿ ಬರುತ್ತಿದ್ದ ಸ್ವಯಂಸೇವಕರನ್ನು ಸಿಪಿಎಂ ಕಾರ್ಯಕರ್ತರು ಥಳಿಸಿದ್ದು, ಈ ವೇಳೆಯಲ್ಲಿ ಎ. ಆದರ್ಶ್, ಪಿ.ವಿ ಜಿಷ್ಣು, ಟಿ. ಅಕ್ಷಯ್, ಮತ್ತು ಕೆ.ಪಿ ಆದರ್ಶ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಹಲ್ಲೆಯ ಸಮಯದಲ್ಲಿ ತೀವ್ರವಾಗಿ ಗಾಯಗೊಂಡ ಜಿಮ್ನೇಶ್ ಗೆ ವಿಪರೀತ ರಕ್ತಸ್ರಾವವಾಗಿದ್ದು, ತಕ್ಷಣವೇ ಆತನನ್ನು ತಲಶ್ಶೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಇನ್ನು ಇದೇ ದಾಳಿಯ ವೇಳೆ ಗಾಯಗೊಂಡಿರುವ ಆರ್‌ಎಸ್‌ಎಸ್ ಕಾರ್ಯಕರ್ತ ಅಕ್ಷಯ್ ಟಿ. ಅವರ ಪಿಣರಾಯಿ, ಪೆನಂಗಿಮೆಟ್ಟದಲ್ಲಿರುವ ಮನೆಯ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ್ದು, ಕಲ್ಲಿನಿಂದ, ಮನೆಯ ಕಿಟಕಿ ಗಾಜುಗಳು ಸಂಪೂರ್ಣ ಮುರಿದು ಬಿದ್ದಿವೆ ಎಂದು ಸ್ಥಳೀಯ ಸುದ್ದಿ ಮೂಲಗಳು ವರದಿ ಮಾಡಿದೆ.

ಇದಲ್ಲದೆ ಸಿಪಿಎಂ ಕಾರ್ಯಕರ್ತರು ಪಯ್ಯನ್ನೂರಿನ ಆರ್‌ಎಸ್‌ಎಸ್ ಕಚೇರಿಯ ಮೇಲೆ ಬಾಂಬ್ ದಾಳಿ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನು ಬಂಧಿತರು ಸಿಪಿಎಂ ಕಾರ್ಯಕರ್ತರು ಎಂದು ತಿಳಿದು ಬಂದಿದ್ದು, ಬಂಧಿತರನ್ನು ಗನಿಲ್, ಕಶ್ಯಪ್ ಎನ್ನಲಾಗಿದೆ.

- Advertisement -
spot_img

Latest News

error: Content is protected !!