- Advertisement -
- Advertisement -
ಉಡುಪಿ; ಮನೆಯಿಂದ ಹೊರಗೆ ಹೋದ ನಿವೃತ್ತ ಶಿಕ್ಷಕ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಸರ್ವೋತ್ತಮ(79) ನಾಪತ್ತೆಯಾದ ನಿವೃತ್ತ ಶಿಕ್ಷಕ.
ಸರ್ವೋತ್ತಮ (79) ಇವರು ನಿವೃತ್ತ ಶಿಕ್ಷರಾಗಿದ್ದು, ಇವರು ದಿನಾಂಕ 16/06/2025 ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ, ಮನೆಯಿಂದ ಹೊರಗೆ ಹೋಗಿದ್ದು ವಾಪಾಸ್ ಬಂದಿಲ್ಲ. ಮಧ್ಯಾಹ್ನ ಸುಮಾರು 2:30 ಗಂಟೆಗೆ ವಂಡ್ಸೆಗೆ ಬಂದಾಗ ಅವರಿಗೆ ಸೇರಿದ ಚಪ್ಪಲಿ, ವಾಚ್, ಬಸ್ ಟಿಕೆಟ್, ಹಾಗೂ ಮೊಬೈಲ್ ವಂಡ್ಸೆ ಸೇತುವೆಯ ಬಳಿ ಸಿಕ್ಕಿದೆ. ಸರ್ವೋತ್ತಮ ಹೆಗ್ಡೆ ರವರು ಈ ಹಿಂದೆ ವಂಡ್ಸೆ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದು, ಅವರು ವಂಡ್ಸೆಯ ಚಕ್ರಾ ಹೊಳೆಗೆ ಹಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನಾಪತ್ತೆ ಯಾಗಿರಬಹುದು ಇಲ್ಲವೇ ಅವರಿಗೆ ಸೇರಿದ ಈ ಸ್ವತ್ತುಗಳನ್ನು ಇಲ್ಲಿಯೇ ಬಿಟ್ಟು ಕಾಣೆಯಾಗಿರಬಹುದಾಗಿದೆ ಎಂದು ಕೊಲ್ಲೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
- Advertisement -