- Advertisement -
- Advertisement -
ಬೆಂಗಳೂರು : ಚಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ ಪ್ರಕರಣದ ಸೂತ್ರಧಾರ, ಮಾಸ್ಟರ್ ಮೈಂಡ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸೆಲ್ವರಾಜ್ ಪೂಬಾಳನ್ ಅಲಿಯಾಸ್ ಮಾಸ್ಟರ್ ಉರುಫ್ ಕ್ಯಾಪ್ಟನ್ ಎಂದು ಗುರುತಿಸಲಾಗಿದೆ. ಆರೋಪಿ ಸೆಲ್ವರಾಜ್ ಪೀಟರ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ.. ರೇಖಾ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಲಾ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಸೆಲ್ವರಾಜ್ ಭಾಗಿಯಾಗಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ರೇಖಾ ಕದಿರೇಶ್ ಹತ್ಯೆಗೆ ಹೋದಾಗ ಯಾರು ಏನೇನು ಮಾಡಬೇಕು? ಹತ್ಯೆ ಮಾಡಿದ ಬಳಿಕ ಆರೋಪಿಗಳು ಪರಾರಿಯಾಗಲು ಏನು ಮಾಡಬೇಕು ಎಂಬುದರ ಬಗ್ಗೆ ಈತ ಸಂಚು ರೂಪಿಸಿದ್ದನು ಎನ್ನಲಾಗಿದೆ.
ಇನ್ನೂ, ಚಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಂತ ಆರೋಪಿಗಳು ಹಾಗೂ ಕದಿರೇಶ್ ಸಹೋದರಿ ಮಾಲಾ ಹಾಗೂ ಅವರ ಪುತ್ರ ಅರುಳ್ ಗೆ ನ್ಯಾಯಾಲಯವು 14 ದಿನ ನ್ಯಾಯಂಗ ಬಂಧನ ವಿಧಿಸಿ ಆದೇಶಿಸಿದೆ.
- Advertisement -