Tuesday, May 7, 2024
Homeಕರಾವಳಿಪ್ರವೀಣ್ ನೆಟ್ಟಾರ್ ಅವರ ಸಾವಿಗೆ ಇದೇ ಪ್ರಮುಖ ಕಾರಣವಾಯ್ತಾ? ಪ್ರವೀಣ್ ನೆಟ್ಟಾರ್ ಸಹೋದರ ಹೇಳಿದ್ದೇನು?

ಪ್ರವೀಣ್ ನೆಟ್ಟಾರ್ ಅವರ ಸಾವಿಗೆ ಇದೇ ಪ್ರಮುಖ ಕಾರಣವಾಯ್ತಾ? ಪ್ರವೀಣ್ ನೆಟ್ಟಾರ್ ಸಹೋದರ ಹೇಳಿದ್ದೇನು?

spot_img
- Advertisement -
- Advertisement -

ಸುಳ್ಯ: ಪ್ರವೀಣ್ ನೆಟ್ಟಾರ್ ಅವರಿಗೆ ಅವರ ಸಾವಿನ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತು ಅನ್ನೋದನ್ನು ಅವರ ಸಹೋದರ ರಂಜಿತ್ ಅವರು ಬಹಿರಂಗಪಡಿಸಿದ್ದಾರೆ.ಕಳೆದ ಹಲವು ದಿನಗಳಿಂದ ಪ್ರವೀಣ್​ಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ರಂಜಿತ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕೂಡಲೇ ಕರೆಗಳು ಬರುತ್ತಿದ್ದವು ಎಂದಿದ್ದಾರೆ. ಇನ್ನು ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ಪ್ರವೀಣ್ ತಿಳಿಸಿದ್ದರು ಎನ್ನಲಾಗಿದೆ.

ಇನ್ನು ಬೆಳ್ಳಾರೆಯಲ್ಲಿ ದೊಡ್ಡ ಮಟ್ಟದಲ್ಲಿ ಚಿಕನ್, ಮಟನ್ ದಂಧೆ ನಡೆಯುತ್ತಿದೆ. ಚಿಕನ್, ಮಟನ್​, ಮೀನು ಮಾರಾಟ ಮಾಡುವ ದಂಧೆ ಮುಸ್ಲಿಮರ ಹಿಡಿತದಲ್ಲಿದೆ. ಹಲವು ದಿನಗಳ ಹಿಂದೆ ಹಿಂದೂಗಳೂ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದರಿಂದಲೇ ಈ ಗಲಾಟೆ ಶುರುವಾಗಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ರಂಜಿತ್​, ಒಂಬತ್ತು ತಿಂಗಳ ಹಿಂದೆಯಷ್ಟೇ ಪ್ರವೀಣ್​ ಚಿಕನ್ ಅಂಗಡಿ ತೆರೆದಿದ್ದರು. ಇದೇ ಕೊಲೆಗೆ ಕಾರಣ ಇರಬಹುದು. ಇದರ ಹಿಂದೆ ಬಹು ದೊಡ್ಡ ಜಾಲವೇ ಇದೆ. ಝಾಕೀರ್ ಮತ್ತು ಶಫೀಕ್ ಪ್ರಮುಖ ಆರೋಪಿಗಳಲ್ಲ. ಇವರ ಹಿಂದೆ ಇರುವುದು ದೊಡ್ಡ ಜಾಲವಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!