- Advertisement -
- Advertisement -
ಉಡುಪಿ: ತಾನು ಬಡತನದಲ್ಲಿದ್ರೂ ಬೇರೊಬ್ಬರ ಕಷ್ಟಕ್ಕೆ ಮಿಡಿಯುವ ಅಪ್ಪಟ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿ ರಾಕ್ಷಸ ವೇಷ ಧರಿಸಿ ಗಮನ ಸೆಳೆದಿದ್ದಾರೆ. ಬಡ ಕುಟುಂಬಗಳ ಮಕ್ಕಳ ಚಿಕಿತ್ಸೆಯ ವೆಚ್ಚಕ್ಕಾಗಿ ಈ ವೇಷ ಧರಿಸಿದ್ದು, ಈಗಾಗಲೇ ತಮ್ಮ ಸಂಚಾರ ಆರಂಭಿಸಿದ್ದಾರೆ.
ಪ್ರತಿ ವರ್ಷ ವಿಶಿಷ್ಟ ವೇಷ ಹಾಕಿ ಹಣ ಸಂಗ್ರಹಿಸಿ ಮಕ್ಕಳ ಚಿಕಿತ್ಸೆಗೆ ನೆರವಾಗುವ ರವಿ ಕಟಪಾಡಿ, ಈ ವರ್ಷ ವೇಷ ಧರಿಸಿ ತಮ್ಮ ಸಂಚಾರ ಶುರು ಮಾಡಿದ್ದಾರೆ. ಕಟಪಾಡಿಯ ಕೋಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರವಿ ಕಟಪಾಡಿ ಹಣ ಸಂಗ್ರಹಕ್ಕೆ ಹೊರಟರು.
- Advertisement -