- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕ್ಕೆ ಎಂಬಲ್ಲಿಯ ಭವಾನಿ ಗೌಡ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿ ಇದ್ದ ಅಡಿಕೆ ಹಾಗೂ ಮನೆಯಲ್ಲಿ ಇದ್ದ ಹಲವಾರು ವಸ್ತುಗಳು ಸುಟ್ಟು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಇಂದು ಭವಾನಿ ಗೌಡರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ,ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಭೇಟಿ ನೀಡಿ ಸಹಾಯಧನ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಲಿ ಸದಸ್ಯರಾದ ಜಯಾವಿಕ್ರಮ್, ಉಪಾಧ್ಯಕ್ಷರಾದ ಐಯೂಬ್ ಡಿ.ಕೆ, ಸದಸ್ಯರಾದ ನವೀನ್ ಕುಮಾರ್ ತಾಜುದ್ದೀನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಕೇಶವತಿ ಪಾಲೇದು, ಮಾಜಿ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮ್ಮಾನ್,ಯೋಗೀಶ್ ಅಳಕ್ಕೆ ನಾರಾಯಣ ಪೂಜಾರಿ, ಪಾಲೇದು ಪ್ರಮುಖರಾದ ಹರೀಶ್ ಕುದ್ಕೋಳಿ, ವಿಶ್ವಾನಾಥ ಕುಲಾಲ್ ಶೀನಪ್ಪ ಗೌಡ,ತೀರ್ಥ ಕುಮಾರ್, ಅಚ್ಚುತ ಆಚಾರ್ಯ, ವೇದಪ್ಪ ಕಲ್ಲೇರಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
.
- Advertisement -