ಮಂಗಳೂರು: ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರುನ ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ್ದು,
ಸುರತ್ಕಲ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.
ಹದಿನೈದು ದಿನಗಳ ಹಿಂದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.ರಾಜ್ಯ ಗೃಹ ಇಲಾಖೆಗೂ ಜಿಲ್ಲೆಯಲ್ಲಿ ನಡೆದ ಘಟನೆ ಹಿನ್ನಲೆಯಲ್ಲಿ ಹಿಂದೂ ನಾಯಕರ ಕೊಲೆಗೆ ಸಂಚು ನಡೆಯುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದ್ರೆ ಆಗಸ್ಟ್ 17 ರಂದು 5 ಜನ ನನ್ನನ್ನ ವಿಚಾರಿಸಿಕೊಂಡು ಬಂದಿದ್ದಾರೆ.
ನನ್ನ ಮಾಜಿ ಡ್ರೈವರ್ ಮನೆಗೆ ಹೋಗಿ ಬಂದೂಕು ತೋರಿಸಿ ವಿಚಾರಿಸಿದ್ದಾರೆ. ಪ್ರಶ್ನಿಸಿದಾಗ ಸಿಸಿಬಿ ಅಧಿಕಾರಿಗಳು ಎಂದು ಡ್ರೈವರ್ ಬಳಿ ಹೇಳಿಕೊಂಡಿದ್ದಾರೆ ಎಂದು ರಾಜೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಬಂದವರು ಹಿಂದೂಗಳೇ ಆಗಿರುವ ಕಾರಣ ಈ ಬಗ್ಗೆ ಹಲವು ಅನುಮಾನಗಳಿವೆ ಎಂದಿದ್ದಾರೆ.ಬಿಜೆಪಿಯ ಕಿವಿ ಹಿಂಡುವ ಕೆಲಸವನ್ನು ಹಿಂದೂ ಮಹಾಸಭಾ ಮಾಡಿದೆ.ಆದ್ರೆ ರಾಜ್ಯ ಬಿಜೆಪಿ ಸರ್ಕಾರ ಹಿಂದುತ್ವ ವಿರೋಧಿ ಕೆಲಸ ಮಾಡಿದೆ.ಹೀಗಾಗಿ ಹಿಂದೂ ಮಹಾಸಭಾ ರಾಜಕೀಯ ಪಕ್ಷವಾಗಿ ಚುನಾವಣೆ ಎದುರಿಸ್ತದೆ.
ಈ ಕಾರಣದಿಂದ ಪೊಲೀಸರು ಸೂಕ್ತ ತನಿಖೆಯನ್ನ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.