Thursday, May 2, 2024
Homeತಾಜಾ ಸುದ್ದಿಮತಾಂದ ಶಕ್ತಿಗಳಿಂದ ಹತ್ಯೆಯಾದ ಹರ್ಷಾ ಕುಟುಂಬಕ್ಕೆ ಆರ್ಥಿಕ ನೆರವು- ತಲಾ 1 ಲಕ್ಷ ರೂ ನೀಡಿದ...

ಮತಾಂದ ಶಕ್ತಿಗಳಿಂದ ಹತ್ಯೆಯಾದ ಹರ್ಷಾ ಕುಟುಂಬಕ್ಕೆ ಆರ್ಥಿಕ ನೆರವು- ತಲಾ 1 ಲಕ್ಷ ರೂ ನೀಡಿದ ಶಾಸಕರಾದ ಹರೀಶ್ ಪೂಂಜಾ ಹಾಗೂ ರಾಜೇಶ್ ನಾಯ್ಕ್

spot_img
- Advertisement -
- Advertisement -

ಬಂಟ್ವಾಳ: ಮತಾಂದ ಶಕ್ತಿಗಳಿಂದ ಹತ್ಯೆಯಾದ ಶಿವಮೊಗ್ಗ ಜಿಲ್ಲೆಯ ಹಿಂದೂ ಸಂಘಟನೆಯ ಪ್ರಮುಖ ಯುವ ಕಾರ್ಯಕರ್ತ ಹರ್ಷಾನ ಸಾವಿಗೆ ನ್ಯಾಯ ಸಿಗಬೇಕು, ಆತನ ಕೊಲೆ ಮಾಡಿದ ಆರೋಪಿಗಳ ಜೊತೆ, ಅದರ ಹಿಂದಿರುವ ಶಕ್ತಿಗಳ ಪತ್ತೆ ಮಾಡಿ ಕಠಿಣ ಶಿಕ್ಷೆಗೊಳಪಡಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಒತ್ತಾಯಿಸಿದ್ದಾರೆ.

ಕುಟುಂಬದ ಆಧಾರ ಸ್ತಂಭವಾಗಿ, ಕುಟುಂಬದ ನಿರ್ವಹಣೆ ಜವಬ್ದಾರಿಯನ್ನು ಹೊಂದಿದ್ದ ಹಿಂದೂ ಸಂಘನೆಯ ಪುಮುಖ ಮತಾಂದ ಶಕ್ತಿಗಳ ಕ್ರೂರ ಕೃತ್ಯಕ್ಕೆ ಬಲಿಯಾದ ಹರ್ಷನ ಕುಟುಂಬಕ್ಕೆ ನ್ಯಾಯ ಒದಗಿಸುವ ಜೊತೆಗೆ ಕುಟುಂಬದ ನಿರ್ವಹಣೆ ಜವಬ್ದಾರಿಗೆ ಕಷ್ಟವಾಗಬಾರದು ಎಂಬುದು ಹಿಂದೂ ಸಮಾಜದ ಧ್ಯೇಯವಾಗಿದೆ, ಈ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವೈಯಕ್ತಿಕ ನೆಲೆಯಲ್ಲಿ ಅವರ ಬ್ಯಾಂಕ್ ಖಾತೆಯಿಂದ ರೂ ಒಂದು ಲಕ್ಷ ಹಣವನ್ನು ಹರ್ಷ ಅವರ ಕುಟುಂಬದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಇದೆ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ನಮ್ಮ ಕಾರ್ಯಕರ್ತನ ಮನೆಯಲ್ಲಿ ಕತ್ತಲು ಆವರಿಸಲು ನಾವು ಬಿಡುವವರಲ್ಲ, ನನ್ನ ಸಾಮಾಜಿಕ ಬದ್ಧತೆಯಾಗಿ ಈ ಮಣ್ಣಿನ ಸಂಸ್ಕಾರ ಸಂಸ್ಕೃತಿಯ ಉಳಿವಿಗೆ ಬಲಿದಾನ ಮಾಡಿದ ವೀರನಿಗೆ ನನ್ನ ಕಿಂಚತ್ ಕಾಣಿಕೆಯಾಗಿ ಒಂದು ಲಕ್ಷವನ್ನು ನೀಡುತ್ತಿದ್ದೇನೆ ಎಂದು ಹಣವನ್ನು ವರ್ಗಾವಣೆ ಮಾಡಿದ್ದಾರೆ. ಪ್ರಚಾರ ಬೇಡ ಇದರಿಂದ ಪ್ರರಣೆಗೊಂಡು ಇನ್ನಷ್ಟು ಕೈಗಳು ಜೊತೆಗೂಡಲಿ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!