ನಂದಿ ಬೆಟ್ಟಕ್ಕೆ ಬಂದು ಪಕ್ಕದ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಿ ಪ್ರಾಣಾಪಾಯ ಎದುರಿಸುತ್ತಿದ್ದ ನಿಶಾಂಕ್ ಗುಲ್ (19) ಎಂಬಾತನ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆಯಡಿ ಅತಿಕ್ರಮ ಪ್ರವೇಶ ಪ್ರಕರಣ ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯಾಧಿಕಾರಿ ಅರಸಳನ್ ಈ ಮಾಹಿತಿ ನೀಡಿದ್ದಾರೆ.
ನಿಶಾಂಕ್ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅವರು ಹೇಳಿದರು.
ನಂದಿ ಬೆಟ್ಟದ ಹಲವು ಭಾಗಗಳಲ್ಲಿ ಚಾರಣ ಕೈಗೊಳ್ಳಲು ಅನುಮತಿ ಇಲ್ಲ. ಅಲ್ಲಿ ಹಲವೆಡೆ ಮೊಬೈಲ್ ಫೋನ್ ಸಿಗ್ನಲ್ ಲಭ್ಯವಿಲ್ಲ. ಆದ್ದರಿಂದ ಯಾರಾದರೂ ಅಪಾಯವನ್ನು ಎದುರಿಸಿದರೆ, ಸಹಾಯಕ್ಕಾಗಿ ಯಾರೂ ಅಲ್ಲಿಗೆ ತಲುಪಲು ಸಾಧ್ಯವಿಲ್ಲ. ನಿಶಾಂಕ್ ಅದೃಷ್ಟ ಖುಲಾಯಿಸಿ ಹೊರ ಬಂದಿದ್ದಾನೆ ಎಂಬುದು ಜನರ ನಂಬಿಕೆ. ಅವರು ಯಾವುದೇ ಕಾಡು ಪ್ರಾಣಿಗಳ ದಾಳಿಗೆ ಒಳಪಡದಿರುವುದು ಆಶ್ಚರ್ಯಕರವಾಗಿದೆ.
ಜಿಲ್ಲಾಡಳಿತ ಗುರುತಿಸಿರುವ ಕೆಲವು ಆಯ್ದ ಟ್ರೆಕ್ಕಿಂಗ್ ಮಾರ್ಗಗಳನ್ನು ಬಳಸಲು ಅರಣ್ಯ ಇಲಾಖೆಯ ಅನುಮತಿ ಪತ್ರ ಕಡ್ಡಾಯವಾಗಿದೆ. ಸುರಕ್ಷತೆಯ ಹಿತದೃಷ್ಟಿಯಿಂದ ಅನುಭವಿ ಮಾರ್ಗದರ್ಶಿಗಳ ಸಹಾಯವನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ. ಅನುಮತಿಯಿಲ್ಲದೆ ಪ್ರವೇಶಿಸುವ ವ್ಯಕ್ತಿಗಳು, ಅಂತಹ ಜನರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 24 ರ ಅಡಿಯಲ್ಲಿ ಅತಿಕ್ರಮಣ ಆರೋಪವನ್ನು ದಾಖಲಿಸಬಹುದು. ಚಾರಣಿಗರು ನಿಯಮಗಳನ್ನು ನಿರ್ಲಕ್ಷಿಸುವ ಮೂಲಕ ಸುದೀರ್ಘ ಕಾನೂನು ಪ್ರಕ್ರಿಯೆಗಳಲ್ಲಿ ಸಿಲುಕಿಕೊಳ್ಳುವ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಹೇಳಿದರು.