- Advertisement -
- Advertisement -
ರಾಯಚೂರು: ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಳೆದ ಎರಡು ತಿಂಗಳಿನಿಂದ ತನ್ನ ಉತ್ಪಾದನಾ ಪ್ರಕ್ರಿಯೆ ಸ್ಥಗಿತಗೊಳಿಸಿದೆ. ಎಂಟು ಘಟಕಗಳು ಸಂಪೂರ್ಣ ಮುಚ್ಚಿದ್ದು ಕೆಲಸಗಾರರು ಅತಂತ್ರಸ್ಥಿತಿಯಲ್ಲಿದ್ದಾರೆ. ಈ ಮಧ್ಯೆ ಸರಕಾರ ಸಂಪೂರ್ಣವಾಗಿ ಶಾಖೋತ್ಪನ್ನ ಕೇಂದ್ರ ಮುಚ್ಚಲಿದೆ ಎಂಬ ಮಾತು ಕೇಳಿಬರುತ್ತಿದ್ದು, 1720 ಮೆಗಾವ್ಯಾಟ್ ನ ವಿದ್ಯುತ್ ಕೇಂದ್ರ ಇಂದು ಉತ್ಪಾದನೆ ಸ್ಥಗಿತಗೊಸಿದೆ. ಈ ಹಿಂದೆ ರಾಜ್ಯದ ಅವಶ್ಯಕತೆಯ ಶೇ.40ರಷ್ಟು ವಿದ್ಯುತ್ ಈ ಘಟಕದಿಂದ ಉತ್ಪಾದನೆಯಗುತ್ತಿತ್ತು. ಸರಕಾರ ಘಟಕದ ಆರಂಭದ ಕುರಿತು ಮಾಹಿತಿ ನೀಡಲಿ ಎಂದು ಸಿಬ್ಬಂದಿ ಎದುರುನೋಡುತ್ತಿದ್ದಾರೆ.
- Advertisement -