Friday, May 17, 2024
Homeಕರಾವಳಿಮಂಗಳೂರಿನಲ್ಲಿ ಕಂಠಪೂರ್ತಿ ಕುಡಿದು ಕಾರು ಚಾಲನೆ: BSNL ನ ನಿವೃತ್ತ ಉದ್ಯೋಗಿಯ ಪ್ರಾಣ ತೆಗೆದ ಪಿಡಬ್ಲೂಡಿ...

ಮಂಗಳೂರಿನಲ್ಲಿ ಕಂಠಪೂರ್ತಿ ಕುಡಿದು ಕಾರು ಚಾಲನೆ: BSNL ನ ನಿವೃತ್ತ ಉದ್ಯೋಗಿಯ ಪ್ರಾಣ ತೆಗೆದ ಪಿಡಬ್ಲೂಡಿ ಎಂಜಿನಿಯರ್

spot_img
- Advertisement -
- Advertisement -

ಮಂಗಳೂರು: ಪಿಡಬ್ಲೂಡಿ ಎಂಜಿನಿಯರ್ ಕಂಠಪೂರ್ತಿ ಕುಡಿದು ಕಾರು ಚಲಾಯಿಸಿ ವ್ಯಕ್ತಿಯೊಬ್ಬರು ಜೀವ ತೆಗೆದ ಘಟನೆ ಮಂಗಳೂರಿನ ಸರ್ಕ್ಯೂಟ್ ಹೌಸ್ ಬಳಿ ನಡೆದಿದೆ.

BSNL ನ ನಿವೃತ್ತ ಉದ್ಯೋಗಿ ಎ.ಆನಂದ್ ಮೃತ ದುರ್ದೈವಿ. ಆನಂದ್ ನಿವೃತ್ತಿಯ ಬಳಿಕವೂ ಉಡುಪಿಯಲ್ಲಿ ಉದ್ಯೋಗವೊಂದನ್ನು ಮಾಡಿ ನಿತ್ಯ ಮಂಗಳೂರಿನ ತಮ್ಮ ಮನೆಗೆ ವಾಪಸಾಗುತ್ತಿದ್ದರು. ನಿನ್ನೆಯೂ ಎಂದಿನಂತೆ ರಾತ್ರಿ ಬಸ್‌ನಿಂದ ಇಳಿದು ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಬರ್ತಿದ್ರು. ಅದ್ರೆ ಅಷ್ಟರಲ್ಲಾಗಲೇ ಪಿಡಬ್ಲೂಡಿ ಎಂಜಿನಿಯರ್ ಷಣ್ಮುಗಂ ಕಂಠಪೂರ್ತಿ ಕುಡಿದು ಕಾರನ್ನು ಡ್ರೈವ್ ಮಾಡಿ ಯಮನಾಗಿ ಬಂದೆರಗಿದ್ದಾನೆ. ನಡೆದುಕೊಂಡು ಬರುತ್ತಿದ್ದ ಆನಂದ್ ಅವರಿಗೆ ಹಿಂಬದಿಯಿಂದ ಗುದ್ದಿದ್ದಾನೆ. ಅಪಘಾತದ ರಭಸಕ್ಕೆ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪಿಡಬ್ಲೂಡಿ ಇಲಾಖೆಯಲ್ಲಿ ಬಂಟ್ವಾಳ ಎ.ಇ.ಇ ಆಗಿರುವ ಷಣ್ಮುಗಂ ತಪ್ಪು ಮಾಡಿರುವುದಲ್ಲದೇ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ವಿಷಯ ತಿಳಿದು ಮಫ್ತಿಯಲ್ಲಿದ್ದ ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸ್ಥಳಕ್ಕೆ ತೆರೆಳಿದ್ದಾರೆ. ಕಮೀಷನರ್ ಬಳಿಯೇ ಈತ ವಾಹನ ಚಾಲನೇ ಮಾಡುತ್ತಿದ್ದದ್ದು ನನ್ನ ತಮ್ಮ ಅಂತಾ ಹೇಳಿ ದಿಕ್ಕು ತಪ್ಪಿಸೋ ಯತ್ನ ಮಾಡಿದ್ದಾರೆ.

ಆದ್ರೆ ಸ್ಥಳೀಯರ ಮಾಹಿತಿ, ಸಿಸಿಟಿವಿ ಫೂಟೇಜ್, ಸಾಕ್ಷಾಧಾರ ಕಲೆ ಹಾಕಿ ಅಪಘಾತ ನಡೆಸಿರುವುದು ಈತನೇ ಎಂಬುದನ್ನು ಪೊಲೀಸ್ ಅಧಿಕಾರಿಗಳು ಕನ್ಫರ್ಮ್ ಮಾಡಿಕೊಂಡಿದ್ದಾರೆ. ಹೀಗಾಗಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  


- Advertisement -
spot_img

Latest News

error: Content is protected !!