- Advertisement -
- Advertisement -
ಪುತ್ತೂರು; ಕೋಳಿ ಮಾಂಸದ ಅಂಗಡಿಯಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಪರಿಶೀಲನೆ ನಡೆಸಿದಾಗ ಅಂಗಡಿಯಲ್ಲಿ 1 ಕೆಜಿಯಷ್ಟು ಗೋ ಮಾಂಸ ಪತ್ತೆಯಾದ ಘಟನೆ ಪುತ್ತೂರಿನ ಪಡೀಲ್ ನ ಕೊಟಾಚಾ ಹಾಲ್ ಬಳಿ ನಡೆದಿದೆ.
ಆರೋಪಿಯ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯಡಿ ಕೇಸ್ ದಾಖಲಾಗಿದೆ . ಪಡೀಲ್ ನಲ್ಲಿನ ಕೋಳಿ ಮಾಂಸದ ಅಂಗಡಿಯಲ್ಲಿ ದನದ ಮಾಂಸ ಮಾರಾಟದ ಬಗ್ಗೆ ಪೊಲೀಸರಿಗೆ ಹಿಂದೂ ಸಂಘಟನೆಗಳು ದೂರು ನೀಡಿದ್ದವು.ಅರುಣ್ ಪುತ್ತಿಲ ಕೂಡ ಪೊಲೀಸರ ಬಳಿ ತೆರಳಿ ಈ ಕುರಿತು ಮಾತುಕತೆ ನಡೆಸಿದ್ದರು ಎನ್ನಲಾಗಿದೆ.ಅದರಂತೆ ದಾಳಿ ನಡೆಸಿದ ಪೊಲೀಸರು ಅಂಗಡಿಯಲ್ಲಿದ್ದ ಒಂದು ಕೆಜಿಯಷ್ಟು ಗೋಮಾಂಸವನ್ನು ಕೂಡ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
- Advertisement -