Thursday, May 9, 2024
Homeಅಪರಾಧಪುತ್ತೂರು ಅರಣ್ಯ ಸಂಚಾರಿ ದಳದ‌ ಕಾರ್ಯಾಚರಣೆ : ಶಿವಮೊಗ್ಗದಲ್ಲಿ ಕೃಷ್ಣಮೃಗದ ಚರ್ಮ ಮಾರಾಟಕ್ಕೆ ಯತ್ನ :...

ಪುತ್ತೂರು ಅರಣ್ಯ ಸಂಚಾರಿ ದಳದ‌ ಕಾರ್ಯಾಚರಣೆ : ಶಿವಮೊಗ್ಗದಲ್ಲಿ ಕೃಷ್ಣಮೃಗದ ಚರ್ಮ ಮಾರಾಟಕ್ಕೆ ಯತ್ನ : ಇಬ್ಬರು ಆರೋಪಿಗಳ ಬಂಧನ

spot_img
- Advertisement -
- Advertisement -

ಶಿವಮೊಗ್ಗ : ಬೆಂಗಳೂರು ಸಿಐಡಿ ಪೊಲೀಸ್ ಅರಣ್ಯ ಘಟಕದ ಪುತ್ತೂರು ಅರಣ್ಯ ಸಂಚಾರಿ ದಳದ ವಿಭಾಗದವರು ಶಿವಮೊಗ್ಗದಲ್ಲಿ ಇಂದು ಸಂಜೆ 3 ಗಂಟೆಗೆ ಕಾರ್ಯಾಚರಣೆ ನಡೆಸಿ ಎರಡು ಕೃಷ್ಣ ಮೃಗದ ಚರ್ಮ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಬಳಿ ಎರಡು ಕೃಷ್ಣಮೃಗದ ಚರ್ಮ ಮಾರಾಟ ಮಾಡಲು ಹಾವೇರಿಯಿಂದ ಬಸ್ ಮೂಲಕ ಬಂದು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಮಾರು ವೇಷದಲ್ಲಿ ದಾಳಿ ಮಾಡಿ ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕಿನ ಖಲಿಲ್(33) ಮತ್ತು ಹಾವೇರಿ ಜಿಲ್ಲೆಯ ಹೊರೆಕೆರೂರು ತಾಲೂಕಿನ ಮುಜಾಮಿಲ್ (25) ಬಂಧಿತ ಆರೋಪಿಗಳು.

ಆರೋಪಿಗಳಿಂದ ಎರಡು ಕೃಷ್ಣಮೃಗ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಹೆಚ್ಚಿನ ತನಿಖೆಗೆ ಸ್ಥಳೀಯ ಅರಣ್ಯ ಇಲಾಖೆಗೆ ನೀಡಲಾಗಿದೆ.ಕಾರ್ಯಾಚರಣೆಯಲ್ಲಿ ಪುತ್ತೂರು ಅರಣ್ಯ ಸಂಚಾರಿ ದಳದ ಪಿಎಸ್ಐ ಶ್ರೀ ಮತಿ ಜಾನಕಿ.ಕೆ ಮತ್ತು ಸಿಬ್ಬಂದಿ ಹೆಡ್ ಕ್ವಾನ್ಟೇಬಲ್ ಸುಂದರ್ ಶೆಟ್ಟಿ ಹಾಗು ಉದಯ ಕುಮಾರ್ ಭಾಗವಹಿಸಿದರು.

- Advertisement -
spot_img

Latest News

error: Content is protected !!