Thursday, June 4, 2026
Homeಕರಾವಳಿಉಡುಪಿಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರು ಅಪರಿಚಿತ ಬಾಲಕರ ರಕ್ಷಣೆ: ಇಬ್ಬರು ಮಕ್ಕಳು ಕಲ್ಯಾಣ ಸಮಿತಿ ವಶಕ್ಕೆ

ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರು ಅಪರಿಚಿತ ಬಾಲಕರ ರಕ್ಷಣೆ: ಇಬ್ಬರು ಮಕ್ಕಳು ಕಲ್ಯಾಣ ಸಮಿತಿ ವಶಕ್ಕೆ

- Advertisement -
- Advertisement -

ಉಡುಪಿ: ಉಚ್ಚಿಲ ಹಾಗೂ ಉಡುಪಿ ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರು ಅಪರಿಚಿತ ಬಾಲಕರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿದ್ದರು. ರಕ್ಷಿಸಲ್ಪಟ್ಟಿರುವ ಬಾಲಕರಿಗೆ ಹೊಸಬೆಳಕು ಆಶ್ರಮದ ಸಂಚಾಲಕ ವಿನಯಚಂದ್ರ ಸಾಸ್ತಾನ ಅವರು ಆಶ್ರಯ ಒದಗಿಸಿದ್ದರು.

ಇಬ್ಬರು ಬಾಲಕರು ಮೂಗರಾಗಿದ್ದರಿಂದ ಹೆಸರು ವಿಳಾಸ ತಿಳಿದುಬಂದಿರಲಿಲ್ಲ. ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಸಂಬಂಧಿಕರು ಸಂಪರ್ಕಿಸದೆ ಇರುವುದರಿಂದ ಬಾಲಕರಿಬ್ಬರನ್ನು ನಿಟ್ಟೂರಿನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ಸಮಾಜಸೇವಕರು ಒಪ್ಪಿಸಿದ್ದಾರೆ.

- Advertisement -

Latest News

error: Content is protected !!