- Advertisement -
- Advertisement -
ಬೆಂಗಳೂರು: ಉಡುಪಿಯ ಡಾ.ಕೆ. ಶಿವರಾಮ ಕಾರಂತ ಪ್ರತಿಷ್ಠಾನಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಧ್ಯಕ್ಷರಾಗಿ ಆನಂದ ಸಿ. ಕುಂದರ್ ಅವರನ್ನು ನೇಮಕ ಮಾಡಲಾಗಿದೆ.
ಪ್ರತಿಷ್ಠಾನದ ಸದಸ್ಯರಾಗಿ ಎ.ಎಸ್.ಎನ್. ಹೆಬ್ಬಾರ್, ವಿಠ್ಠಲ ಗಾಂವ್ಕರ್, ನರೇಂದ್ರ ಕೋಟ, ಪೂರ್ಣಿಮಾ ಸುರೇಶ್, ಆನಂದ ಪಿ. ಮುದ್ರಾಡಿ, ಪಾರ್ವತಿ ಜಿ. ಐತಾಳ್, ಡಾ. ಮಾಧವಿ ಭಂಡಾರಿ ಅವರನ್ನು ನೇಮಕ ಮಾಡಲಾಗಿದೆ.
ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕಾರ್ಯನಿರ್ವಹಿಸುತ್ತಿದೆ.
- Advertisement -