Sunday, April 28, 2024
Homeಕರಾವಳಿಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ಘೋಷಿಸಿದ್ದ ಪ್ರತಿಭಾ ಕುಳಾಯಿ: ಬಹುಮಾನದ ಮೊತ್ತವನ್ನು...

ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ಘೋಷಿಸಿದ್ದ ಪ್ರತಿಭಾ ಕುಳಾಯಿ: ಬಹುಮಾನದ ಮೊತ್ತವನ್ನು ಬಡ ಮಕ್ಕಳಿಗೆ ಹಂಚಿದ ಮಾಜಿ ಕಾರ್ಪೋರೇಟರ್

spot_img
- Advertisement -
- Advertisement -

ಪುತ್ತೂರು: ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿದ ಬಿಲ್ಲವರಿಗೆ 1 ಲಕ್ಷ ರೂ. ಬಹುಮಾನ ನೀಡೋದಾಗಿ ಹೇಳಿದ್ದ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ,ಬಳಿಕ ಆ ಹಣವನ್ನು ಬಡ ವಿದ್ಯಾರ್ಥಿಗಳಿಗೆ ನೀಡೋದಾಗಿ ಹೇಳಿದ್ದರು. ಅದರಂತೆ ಪ್ರತಿಭಾ ಅವರು ಆ ಹಣವನ್ನು ಬಡ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರತಿಭಾ, ಕೋಟಿ ಚನ್ನಯ್ಯ ಹಾಗೂ ಬಿಲ್ಲವ ಸಮಾಜದ ಬಗ್ಗೆ ಜಗದೀಶ್ ಅಧಿಕಾರಿ ಅವಹೇಳನಕಾರಿಯಾಗಿ ಮಾತನಾಡಿದ್ದು, ತುಂಬಾ ಬೇಸರವಾಯಿತು. ಹೀಗಾಗಿ ಅವರ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ಘೋಷಿಸಿ 3 ದಿನದ ಗಡುವು ನೀಡಿದ್ದೆ. ಎರಡೇ ದಿನದಲ್ಲಿ ಅವರು ಗರಡಿ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿದ್ದಾರೆ. ಹಾಗಾಗಿ ನನ್ನ ಘೋಷಣೆ ವಾಪಸ್ ಪಡೆದುಕೊಂಡಿದ್ದು, ಆ ಹಣವನ್ನು 10 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಂಚಿದ್ದೇನೆ ಎಂದು ತಿಳಿಸಿದರು.

ಅಲ್ಲದೇ ಗೆಜ್ಜೆಗಿರಿ ಮೂಲಕವೇ 20 ಬಡ ಮಕ್ಕಳನ್ನು ಆಯ್ಕೆ ಮಾಡಿಕೊಟ್ಟಲ್ಲಿ ಅವರ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸುತ್ತೇನೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!