ಬೆಳ್ತಂಗಡಿ : ಸರಕಾರಿ ಗುಡ್ಡ ಪ್ರದೇಶದಲ್ಲಿ ಸಾರ್ವಜನಿಕವಾಗಿ ಹಣ ಪಣವಾಗಿಟ್ಟುಕೊಂಡು ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ದಾಳಿ ಮಾಡಿ ನಾಲ್ಕು ಜನರನ್ನು ಬಂಧಿಸಿದ್ದಾರೆ.ನಾಲ್ಕು ಜನ ಆರೋಪಿಗಳು ಪರಾರಿಯಾಗಿದ್ದು ಒಟ್ಟು 8 ಜನ ಜೂಜಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿಕೊಂಡು,ಸ್ಥಳದಲ್ಲಿದ್ದ ಹಣ ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು ತೋಟತ್ತಾಡಿ ಗ್ರಾಮದ ಮುಂಡಾಯಿಲು ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆಂದು ದೊರೆತ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ತೋಟತ್ತಾಡಿ ಗ್ರಾಮದ ಮುಂಡಾಯಿಲು ಎಂಬಲ್ಲಿಗೆ ಮಾ.12 ರ ಬೆಳಗ್ಗಿನ ಜಾವ 3.30 ಗಂಟೆಗೆ ದಾಳಿ ಮಾಡಿದೆ. ಈ ವೇಳೆ ಅಂದರ್ ಬಾಹರ್ ಆಡುತ್ತಿರೋದು ಖಚಿತವಾಗಿದೆ
ಪೊಲೀಸ್ ದಾಳಿ ವೇಳೆ ಸ್ಥಳದಿಂದ ಸಿದ್ದಿಕ್ ಯಾನೆ ಅರೆಕಲ್ ಸಿದ್ದಿಕ್,ಕೃಷ್ಣ ಯಾನೆ ಕಿಟ್ಟ ಗಾಂಧಿನಗರ,ಸಂತೋಷ್ ಗಾಂಧಿನಗರ,ಸುಧಾಕರ ಕೊಯಿಕುರಿ ಪರಾರಿಯಾಗಿದ್ದು.ಉಳಿದ ಆರೋಪಿಗಳಾದ ಚಾರ್ಮಾಡಿ ಗ್ರಾಮದ ರಹೀಂ(44), ಮುಂಡಾಜೆ ಗ್ರಾಮದ ಫಯಾಜ್ ಪಾಷಾ (33), ಕಡಿರುದ್ಯಾವರ ಗ್ರಾಮದ ರಾಜೇಶ್ (46), ತೋಟತ್ತಾಡಿ ಗ್ರಾಮದ ಅನೀಲ್ (45) ಬಂಧಿಸಿದ್ದಾರೆ
ಜೂಜಾಟದ ಸ್ಥಳದಲ್ಲಿದ್ದ ಅಂದಾಜು ಮೌಲ್ಯ ರೂ 11,870/- ವಶಪಡಿಸಿಕೊಂಡಿದ್ದಾರೆ. ಜೂಜಾಟದಲ್ಲಿ ನಿರತರಾಗಿದ್ದ ಒಟ್ಟು 8 ಮಂದಿಯ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.