Saturday, May 18, 2024
Homeಕರಾವಳಿಮಂಗಳೂರು: ಹಿಂದೂ ಮುಖಂಡನ ಹತ್ಯೆಗೆ ಯತ್ನ ಆರೋಪ:  ಕೊಲೆಗೆ ಸಂಚು ನಡೆದಿಲ್ಲವೆಂದು ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಟನೆ

ಮಂಗಳೂರು: ಹಿಂದೂ ಮುಖಂಡನ ಹತ್ಯೆಗೆ ಯತ್ನ ಆರೋಪ:  ಕೊಲೆಗೆ ಸಂಚು ನಡೆದಿಲ್ಲವೆಂದು ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಟನೆ

spot_img
- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ಹಿಂದೂ ಮುಖಂಡನ ಹತ್ಯೆಗೆ ಯತ್ನ ನಡೆದಿದೆ ಎಂಬ ವಿಚಾರಕ್ಕೆ  ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರ, ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.

ಇಂದು ಬೆಳಿಗ್ಗೆ ವ್ಯಕ್ತಿಯೋರ್ವರು ತಮಗೆ ಜೀವ ಬೆದರಿಕೆಯೊಡ್ಡಲಾಗಿದ್ದು, ಹತ್ಯೆಗೆ ಸಂಚು ರೂಪಿಸಿದ್ದಾಗಿ ಹಾಗೂ ಬೈಕ್ ನಲ್ಲಿ ಅಪರಿಚಿತರು ತಮ್ಮನ್ನು ಹಿಂಬಾಲಿಸುತ್ತಿರುವುದಾಗಿ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಗೆ ಇಂಟರ್ ನೆಟ್ ಮೂಲಕ ಕಾಲ್ ಮಾಡಿ ಬೆದರಿಕೆ ಹಾಕುತ್ತಿರುವುದಾಗಿಯೂ ತಿಳಿಸಿದ್ದರು. ಹಾಗಾಗಿ ದೂರುದಾರನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಪರಿಶೀಲಿಸಿದಾಗ ವ್ಯಕ್ತಿಗೆ ಇಂಟರ್ ನೆಟ್ ನಿಂದ ಕಾಲ್ ಬಂದಿರುವುದು ನಿಜ. ಆದರೆ ಬೈಕ್ ನಲ್ಲಿ ಬಂದಿದ್ದು ಫುಡ್ ಡೆಲಿವರಿ ಬಾಯ್. ದೂರುದಾರರ ಪಕ್ಕದ ಮನೆಗೆ ಫುಡ್ ಡೆಲಿವರಿ ಹುಡುಗ ಬಂದಿದ್ದ. ಸಿಸಿ ಟಿವಿಯಲ್ಲಿ ಫುಡ್ ಡೆಲಿವರಿ ಹುಡುಗ ಬಂದಿದ್ದು ಸೆರೆಯಾಗಿದೆ. ಫುಡ್ ಡೆಲಿವರಿ ಬಾಯ್ ಬಂದಿದ್ದನ್ನು ಅಪಪ್ರಚಾರ ಮಾಡಲಾಗಿದೆ. ಬೈಕ್ ನಲ್ಲಿ ಬಂದು ಹತ್ಯೆಗೆ ಸಂಚು ಎಂದು ಅನಗತ್ಯವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ಆದರೆ ಅಂತಹ ಯಾವುದೇ ಸಂಚು ನಡೆದಿಲ್ಲ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!