- Advertisement -
- Advertisement -
ಮಂಗಳೂರು : ರಷ್ಯಾ ಉಕ್ರೇನ್ ನಡೆಯುತ್ತಿರುವ ಭೀಕರ ಸಮರದಲ್ಲಿ ,ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುವ ‘ ಆಪರೇಶನ್ ಗಂಗಾ ‘ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಪೈಲಟ್ ಕ್ಯಾಪ್ಟನ್ ಮೈಕೆಲ್ ಸಲ್ದಾನ ಪಾಲ್ಗೊಂಡಿದ್ದಾರೆ.
ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಪೈಲಟ್ ಆಗಿರುವ ಇವರನ್ನು ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ನಿಯೋಜಿಸಲಾಗಿತ್ತು . ಈಗಾಗಲೇ ಅನೇಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರು ಸ್ವದೇಶಕ್ಕೆ ಕರೆತಂದಿದ್ದಾರೆ .
2 ವರ್ಷಗಳ ಹಿಂದೆ ಕೋವಿಡ್ -19 ಹರಡುತ್ತಿದ್ದ ಸಂದರ್ಭ ಗಲ್ಫ್ ರಾಷ್ಟ್ರಗಳಲ್ಲಿ ಅನೇಕ ಭಾರತೀಯರು ಸಿಲುಕಿಕೊಂಡಿದ್ದರು . ಆಗಲೂ ಇವರೇ ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಪೈಲಟ್ ಆಗಿ ‘ ವಂದೇ ಭಾರತ್ ಮಿಷನ್ ‘ ಏರ್ ಲಿಫ್ಟ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ನೂರಾರು ಭಾರತೀಯರನ್ನು ಮರಳಿ ಕರೆತಂದಿದ್ದರು.
- Advertisement -