- Advertisement -
- Advertisement -
ಉಡುಪಿ: ಮೃತಪಟ್ಟಿದ್ದ ನಾಯಿಗೆ ಸರಪಳಿ ಬಿಗಿದು ದ್ವಿಚಕ್ರ ವಾಹನಕ್ಕೆ ಕಟ್ಟಿ ಎಳೆದೊಯ್ದಿರುವ ಘಟನೆಯೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಕಾಪು ತಾಲೂಕಿನ ಶಿರ್ವದಲ್ಲಿ ಈ ಕೃತ್ಯ ಜರುಗಿದ್ದು, ವ್ಯಕ್ತಿಯೋರ್ವ ಸ್ಕೂಟರ್ ಗೆ ಕಟ್ಟಿ ಮೃತಪಟ್ಟಿದ್ದ ನಾಯಿಯನ್ನು ಎಳೆದೊಯ್ದಿದ್ದಾನೆ.
ಕಾಪುವಿನ ಕೊಂಬಗುಡ್ಡೆಯ ನಿವಾಸಿ ಖಾದರ್ ಎಂಬಾತ ಈ ಕೃತ್ಯ ಎಸಗಿದ್ದು, ಕೊಂಬಗುಡ್ಡೆಯಿಂದ ಶಿರ್ವ ಪೇಟೆಯವರೆಗೆ ನಾಯಿಯನ್ನು ಸುಮಾರು ಐದು ಕಿಲೋ ಮೀಟರ್ ದೂರ ಎಳೆದೊಯ್ಯಲಾಗಿದೆ.ನಾಯಿಯ ದೇಹಕ್ಕೆ ಸರಪಳಿ ಹಾಕಿ ಸ್ಕೂಟರ್ನ ಸೀಟಿಗೆ ಕಟ್ಟಲಾಗಿತ್ತು.ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
- Advertisement -