- Advertisement -
- Advertisement -
ಮಂಗಳೂರು: ಇಂದು ಚಂದ್ರಗ್ರಹಣ ಸಂಭವಿಸಲಿದ್ದು ಗ್ರಹಣ ಭಾರತದಲ್ಲಿ ಗೋಚರಿಸುತ್ತಿಲ್ಲ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ ವಾಗಿರುವುದರಿಂದ ಚಂದ್ರಗ್ರಹಣ ಭಾರತೀಯರಿಗೆ ಕಾಣಸಿಗುವುದಿಲ್ಲ. ಗ್ರಹಫಲಗಳ ಪ್ರಕಾರ ಹಲವು ರಾಶಿಗಳು ಈ ಬಾರಿಯ ಗ್ರಹಣದಿಂದ ತೊಂದರೆ ಅನುಭವಿಸಲಿವೆ ಎನ್ನಲಾಗಿದೆ.
ಮಧ್ಯಾಹ್ನ 12:59:09 ಕ್ಕೆ ಪ್ರಾರಂಭವಾಗಿ ಸಂಜೆ 05:25:09 ರವರೆಗೆ ಮುಂದುವರಿಯಲಿರುವ ಗ್ರಹಣವನ್ನು”ಪೆನಂಬ್ರಲ್’ ಚಂದ್ರ ಗ್ರಹಣ ಎನ್ನಲಾಗುತ್ತದೆ. ಅಂದರೆ ಅರೆನೆರಳು ಚಂದ್ರಗ್ರಹಣ ಎಂದರ್ಥ.ಗ್ರಹಣದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಚಂದ್ರನ ಮೇಲ್ಮೈಗೆ ತಲುಪದಂತೆ ಭೂಮಿಯು ತಡೆಯುತ್ತದೆ.’ಸೂರ್ಯ, ಭೂಮಿ ಮತ್ತು ಚಂದ್ರ ಬಹುತೇಕ ಒಂದೇ ಸರಳ ರೇಖೆಯಲ್ಲಿ ಬಂದಾಗ ಅರೆನೆರಳು ಚಂದ್ರಗ್ರಹಣ ಸಂಭವಿಸುತ್ತದೆ.
- Advertisement -