Tuesday, May 21, 2024
Homeಕರಾವಳಿಉಡುಪಿಭೂತ ಕೋಲ ಕುರಿತ ನಟ ಚೇತನ್ ಹೇಳಿಕೆಗೆ ಪೇಜಾವರ ಶ್ರೀ ಆಕ್ಷೇಪ

ಭೂತ ಕೋಲ ಕುರಿತ ನಟ ಚೇತನ್ ಹೇಳಿಕೆಗೆ ಪೇಜಾವರ ಶ್ರೀ ಆಕ್ಷೇಪ

spot_img
- Advertisement -
- Advertisement -

ಮಂಡ್ಯ: ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂಬ ಚಲನಚಿತ್ರ ನಟ ಚೇತನ್ ಹೇಳಿಕೆಗೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇಂದು ಮಾತನಾಡಿದ ಪೇಜಾವರ ಶ್ರೀ, ಚೀಪ್ ಪಬ್ಲಿಸಿಟಿಗೋಸ್ಕರ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರಚಾರಕ್ಕಾಗಿ ಈ ರೀತಿಯಾದಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಚೀಪ್ ಪಬ್ಲಿಸಿಟಿಗೆ ನಿದರ್ಶನವಾಗಿದೆ, ಯಾವುದಕ್ಕೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಅವರವರ ನಂಬಿಕೆ ಆಚರಣೆಗಳನ್ನು ವಿರೋಧಿಸುವುದು ತಪ್ಪು ಎಂದು ಹೇಳಿರುವ ಪೇಜಾವರ ಶ್ರೀ,‌ ಯಾವ ನೆಲೆಯಲ್ಲಿ ಮಾತನಾಡ್ತಿದ್ದಾರೊ ನನಗೆ ಅರ್ಥವಾಗ್ತಿಲ್ಲ . ಅವರು ನೋಡುವ ದೃಷ್ಟಿಕೋನದಲ್ಲಿ ಎಲ್ಲಾ ಅಡಗಿರುತ್ತದೆ. ಹಿಂದುತ್ವ ಹಾಗೂ ಬ್ರಾಹ್ಮಣತ್ವ ಬೇರೆ ಬೇರೆ ಅಲ್ಲ, ಹಿಂದುತ್ವ ವಿಶಾಲವಾದದ್ದು ಅದರೊಳಗೆ ಬ್ರಾಹ್ಮಣತ್ವವು ಬರುತ್ತದೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!