- Advertisement -
- Advertisement -
ವಿಜಯಪುರ: ರಾಷ್ಟ್ರ ಪಕ್ಷಿ ನವಿಲು ಆಯತಪ್ಪಿ 40 ಅಡಿ ಬಾವಿಯಲ್ಲಿ ಬಿದ್ದಿದ್ದ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.
ಗ್ರಾಮದ ಸುಭಾಸ ಬನಸೋಡೆ ಎಂಬುವವರ ಬಾವಿಯಲ್ಲಿಯೇ ರಾಷ್ಟ್ರ ಪಕ್ಷಿ ಬಿದ್ದಿತ್ತು. ನವಿಲು, ಕಳೆದ ಮೂರು ದಿನಗಳ ಹಿಂದೆಯೇ ಬಾವಿಯಲ್ಲಿ ಬಿದ್ದಿತ್ತು.
ನವಿಲನ್ನು ಹೊರ ತೆಗೆಯಲು ಸ್ಥಳೀಯರು ಸಾಕಷ್ಟು ಪ್ರಯತ್ನ ನಡೆಸಿದರೂ ವಿಫಲವಾಗಿತ್ತು. ನೀರಿದ್ದ ಬಾವಿಯ ಕಲ್ಲು ಚಪ್ಪಡಿಯ ಮೇಲೆಯೇ ನವಿಲು ಕುಳಿತಿತ್ತು. ಸ್ಥಳಕ್ಕೆ ಇಂಡಿ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ನವಿಲನ್ನು ರಕ್ಷಣೆ ಮಾಡಿದ್ದಾರೆ.
ಶಾಂತಪ್ಪ ಬಿರಾದಾರ ಎಂಬುವವರನ್ನು ನವಿಲನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Advertisement -