- Advertisement -
- Advertisement -
ತುಮಕೂರು: ಸಾಕಿದ ಗಿಣಿ ಕಾಣೆಯಾಗಿದ್ದು ಹುಡುಕಿ ಕೊಟ್ಟರೆ 50 ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ಗಿಣಿ ಮಾಲೀಕರು ಪ್ರಕಟಣೆ ಹೊರಡಿಸಿದ್ದಾರೆ.
ತುಮಕೂರು ನಗರದ ಜಯನಗರ ನಿವಾಸಿಯೊಬ್ಬರು ಮನೆಯಲ್ಲಿ ಸಾಕಿದ್ದ ಗಿಣಿ ಕಾಣಿಯಾಗಿದ್ದು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.
ಎರಡೂವರೆ ವರ್ಷದ ಬೂದು ಬಣ್ಣದ ರುಸ್ತುಮಾ ಹೆಸರಿನ ಗಿಣಿ ಕಾಣೆಯಾಗಿದ್ದು ಸಿಕ್ಕಿದರೆ ತಲುಪಿಸುವಂತೆ ಮಾಲೀಕರು ಮನವಿ ಮಾಡಿದ್ದಾರೆ.
ಅಲ್ಲದೇ ಗಿಣಿ ಹುಡುಕಿ ಕೊಟ್ಟವರಿಗೆ ಐವತ್ತು ಸಾವಿರ ರೂಪಾಯಿಗಳ ಬಹುಮಾನವನ್ನೂ ಗಿಣಿ ಮಾಲೀಕರು ಘೋಷಣೆ ಮಾಡಿದ್ದಾರೆ.
- Advertisement -