ಬೆಂಗಳೂರು: ಬಿಗ್ ಬಾಸ್ ನಲ್ಲಿ ನಾನು ಒಳ್ಳೆ ಹುಡುಗ ಅಂತಾ ಹೇಳುತ್ತಲೇ ಮನೆ ಮಾತಾದ ನಟ, ನಿರ್ದೇಶಕ ಪ್ರಥಮ್ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಪ್ರಥಮ್ ಅವರು ಸಿಲಿಕಾನ್ ಸಿಟಿಗೆ ಗುಡ್ ಬೈ ಹೇಳಿದ್ದಾರೆ. ಈ ಹಿಂದೆ ಕೊರೋನಾ ಲಾಕ್ಡೌನ್ ಆರಂಭವಾದಾಗಲೂ ಪ್ರಥಮ್ ನಗರ ಬಿಟ್ಟು ಹಳ್ಳಿಗೆ ಹೋಗಿ ಅಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಹಸು-ಕುರಿ ಮೇಯಿಸುತ್ತಾ ಹಳ್ಳಿಯಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿದ್ದರು.
ಇದೀಗ ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಬೆಂಗಳೂರಿಗೆ ಮರಳಿದ್ದ ಪ್ರಥಮ್ ಈಗ, ತಾವಿದ್ದ ಬಾಡಿಗೆ ಮನೆ ಖಾಲಿ ಮಾಡಿಕೊಂಢು ಬೆಂಗಳೂರಿನಿಂದ ಹೊರಟಿದ್ದಾರೆ. ಪ್ರಥಮ್ ಅವರು ತಾವು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಮಾಹಿತಿ ನೀಡಿಲ್ಲ. ಆದರೆ ಹೆಸರು ತಂದುಕೊಟ್ಟ ಊರು ಹಾಗೂ 3 ವರ್ಷಗಳಿಂದ ಇದ್ದ ಮನೆ ಬಿಡುವಾಗ ಜಾಸ್ತಿನೇ ಬೇಸರ ಆಯ್ತು ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಟಭಯಂಕರ ಸಿನಿಮಾದ ಕೆಲಸಗಳು ಬಾಕಿ ಇದ್ದು, ಅದಕ್ಕಾಗಿ ಆಗಾಗ ಬೆಂಗಳೂರಿಗೆ ಬರುವುದಾಗಿಯೂ ತಿಳಿಸಿದ್ದಾರೆ. ಇನ್ನು ಅವರ ಕಚೇರಿ ಬೆಂಗಳೂರಿನಲ್ಲಿದ್ದು, ಅಲ್ಲೇ ಅವರು ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರಂತೆ.
ಪ್ರಥಮ್ ಅವರಿಗೆ ಜೊತೆಗಿದ್ದ ಜನರಿಗಿಂತ ವಸ್ತುಗಳ ಜೊತೆಗೆ ಅಟ್ಯಾಚ್ಮೆಂಟ್ ಜಾಸ್ತಿ ಅಂತೆ. ಬಿಗ್ ಬಾಸ್ ಗೆದ್ದಾಗಲೂ ಸಹ ಆ ಮನೆ ಬಿಟ್ಟು ಬರುವಾಗ ತುಂಬಾ ಬೇಸರವಾಗಿತ್ತಂತೆ. ಹೊಸ ಸಿನಿಮಾದ ಕೆಲಸಗಳು. ಶೀಘ್ರದಲ್ಲೇ ಗುಡ್ ನ್ಯೂಸ್ ಜೊತೆ ಮತ್ತೆ ಮರಳುತ್ತೇನೆ ಎಂದು ಪ್ರಥಮ್ ಬೇಸರದಿಂದ ಪೋಸ್ಟ್ ಮಾಡಿದ್ದಾರೆ.