Monday, April 29, 2024
Homeತಾಜಾ ಸುದ್ದಿಬೆಂಗಳೂರಿಗೆ ಗುಡ್ ಬೈ ಹೇಳಿದ ಪ್ರಥಮ್: ಇದ್ದಕ್ಕಿಂತೆ ಒಳ್ಳೆ ಹುಡುಗ ಇಂತಹ ನಿರ್ಧಾರ ತೆಗೆದುಕೊಂಡಿದ್ದ್ಯಾಕೆ?

ಬೆಂಗಳೂರಿಗೆ ಗುಡ್ ಬೈ ಹೇಳಿದ ಪ್ರಥಮ್: ಇದ್ದಕ್ಕಿಂತೆ ಒಳ್ಳೆ ಹುಡುಗ ಇಂತಹ ನಿರ್ಧಾರ ತೆಗೆದುಕೊಂಡಿದ್ದ್ಯಾಕೆ?

spot_img
- Advertisement -
- Advertisement -

ಬೆಂಗಳೂರು: ಬಿಗ್ ಬಾಸ್ ನಲ್ಲಿ ನಾನು ಒಳ್ಳೆ ಹುಡುಗ ಅಂತಾ ಹೇಳುತ್ತಲೇ ಮನೆ ಮಾತಾದ ನಟ, ನಿರ್ದೇಶಕ ಪ್ರಥಮ್ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಪ್ರಥಮ್ ಅವರು ಸಿಲಿಕಾನ್ ಸಿಟಿಗೆ ಗುಡ್ ಬೈ ಹೇಳಿದ್ದಾರೆ. ಈ ಹಿಂದೆ ಕೊರೋನಾ ಲಾಕ್​ಡೌನ್​ ಆರಂಭವಾದಾಗಲೂ ಪ್ರಥಮ್​ ನಗರ ಬಿಟ್ಟು ಹಳ್ಳಿಗೆ ಹೋಗಿ ಅಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಹಸು-ಕುರಿ ಮೇಯಿಸುತ್ತಾ ಹಳ್ಳಿಯಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿದ್ದರು.

ಇದೀಗ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಬೆಂಗಳೂರಿಗೆ ಮರಳಿದ್ದ ಪ್ರಥಮ್​ ಈಗ, ತಾವಿದ್ದ ಬಾಡಿಗೆ ಮನೆ ಖಾಲಿ ಮಾಡಿಕೊಂಢು ಬೆಂಗಳೂರಿನಿಂದ ಹೊರಟಿದ್ದಾರೆ. ಪ್ರಥಮ್​ ಅವರು ತಾವು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಮಾಹಿತಿ ನೀಡಿಲ್ಲ. ಆದರೆ ಹೆಸರು ತಂದುಕೊಟ್ಟ ಊರು ಹಾಗೂ 3 ವರ್ಷಗಳಿಂದ ಇದ್ದ ಮನೆ ಬಿಡುವಾಗ ಜಾಸ್ತಿನೇ ಬೇಸರ ಆಯ್ತು ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಟಭಯಂಕರ ಸಿನಿಮಾದ ಕೆಲಸಗಳು ಬಾಕಿ ಇದ್ದು, ಅದಕ್ಕಾಗಿ ಆಗಾಗ ಬೆಂಗಳೂರಿಗೆ ಬರುವುದಾಗಿಯೂ ತಿಳಿಸಿದ್ದಾರೆ. ಇನ್ನು ಅವರ ಕಚೇರಿ ಬೆಂಗಳೂರಿನಲ್ಲಿದ್ದು, ಅಲ್ಲೇ ಅವರು ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರಂತೆ.

ಪ್ರಥಮ್ ಅವರಿಗೆ ಜೊತೆಗಿದ್ದ ಜನರಿಗಿಂತ ವಸ್ತುಗಳ ಜೊತೆಗೆ ಅಟ್ಯಾಚ್ಮೆಂಟ್​ ಜಾಸ್ತಿ ಅಂತೆ. ಬಿಗ್​ ಬಾಸ್​ ಗೆದ್ದಾಗಲೂ ಸಹ ಆ ಮನೆ ಬಿಟ್ಟು ಬರುವಾಗ ತುಂಬಾ ಬೇಸರವಾಗಿತ್ತಂತೆ. ಹೊಸ ಸಿನಿಮಾದ ಕೆಲಸಗಳು. ಶೀಘ್ರದಲ್ಲೇ ಗುಡ್​ ನ್ಯೂಸ್​ ಜೊತೆ ಮತ್ತೆ ಮರಳುತ್ತೇನೆ ಎಂದು ಪ್ರಥಮ್​ ಬೇಸರದಿಂದ ಪೋಸ್ಟ್​ ಮಾಡಿದ್ದಾರೆ.

- Advertisement -
spot_img

Latest News

error: Content is protected !!