- Advertisement -
- Advertisement -
ಉಡುಪಿ: ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ , ಇಂದ್ರಾಳಿಯ ನಿವಾಸಿ ವಾಸುದೇವ ಭಟ್ ನಿಧನರಾಗಿದ್ದಾರೆ .
ವಾಸುದೇವ ಭಟ್ ಉಡುಪಿಯಲ್ಲಿ ನಾದ ವೈಭವಂ ಎಂಬ ಕಲಾ ಸಂಘಟನೆಯನ್ನು ಹುಟ್ಟು ಹಾಕಿ , ಸಂಗೀತ ನತ್ಯ ರೂಪಕ ಹಾಗೂ ಚಲನಚಿತ್ರಗಳನ್ನು ರಚಿಸಿ ನಿರ್ದೇಶಿಸಿ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡವರು.ಅನೇಕ ಖ್ಯಾತ ಗಾಯಕರಿಗೆ ಗುರುಗಳಾಗಿದ್ದರು.
ಇವರು ಅಪಾರ ಸಂಗೀತ ಕ್ಷೇತ್ರದ ಶಿಷ್ಯ ವೃಂದನ್ನು ಆಗಲಿದ್ದಾರೆ . 1994 ರಲ್ಲಿ ಭುವನ ಜ್ಯೋತಿ ಎಂಬ ಐದು ಭಾಷೆಗಳಲ್ಲಿ ರಚಿತವಾದ ಪ್ರಭು ಯೇಸು ಸ್ವಾಮಿಯ ಜೀವನಾಧಾರಿತ ಚಲನಚಿತ್ರ ತಯಾರಿಸಿ ಹಲವರಿಗೆ ಪಾತ್ರ ನೀಡಿದ್ದರು . ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ , ಅವರಿಂದ ಸಂಗೀತ ಕಲಿತವರು ರಾಷ್ಟ್ರಮಟ್ಟದಲ್ಲಿ ಹಾಡುಗಾರಿಕೆಯಲ್ಲಿ ಮನ್ನಣೆ ಪಡೆದವರಾಗಿದ್ದರು.
- Advertisement -