- Advertisement -
- Advertisement -
ಬೆಂಗಳೂರು: ಲಾಕ್ಡೌನ್ ಕಾವಿನ ಮಧ್ಯೆ ನಿಖಿಲ್ ಕುಮಾರಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಅವರ ವೈವಾಹಿಕ ಜೀವನದ ಹಲವು ಸಂತಸದ ಕ್ಷಣಗಳನ್ನ ಅಭಿಮಾನಿಗಳು ಫೊಟೋ ಮೂಲಕ ನೋಡಿ ಆಗಲೇ ಸೈ ಎಂದಿದ್ದಾರೆ.
4 ತಿಂಗಳ ದಾಂಪತ್ಯ ಜೀವನದಲ್ಲಿ ಹಲವು ಪ್ರದೇಶಗಳ ಭೇಟಿ, ಕೊರೋನಾ ಸಂತ್ರಸ್ಥರ ಜೊತೆಗಿನ ಸೇವಾ ಕಾರ್ಯದಲ್ಲಿ ತೊಡಗಿದ್ದರು. ಈಗ ನೀಖಿಲ್ ಸುದ್ದಿಯಾಗಿರುವುದು ಹೊಸತೊಂದು ವಿಷಯಕ್ಕೆ.
ಮಡದಿಯ ಕೈರುಚಿ ತಿಂದಿಲ್ಲ ಎಂದು ಹೇಳುತ್ತಿದ್ದ ನಿಖಿಲ್ಗೆ ನಾನ್ವೆಜ್ ಮಾಡಿಕೊಡುವ ಮೂಲಕ ಆಸೆ ಈಡೇರುವಂತೆ ಮಾಡಿದ್ದಾರೆ. ಮಡದಿ ಅಡುಗೆ ಮಾಡುವ ವೀಡಿಯೋ ಹಂಚಿಕೊಂಡಿರುವ ನಿಖಿಲ್ ತಮ್ಮ ಮಡದಿಯ ಕೈರುಚಿಯನ್ನ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.
- Advertisement -