- Advertisement -
- Advertisement -
ಕಡಬ: ಮದುವೆಯಾಗಿದ್ದೇ ತಡ ಈಗಿನ ನವಜೋಡಿ ಹನಿಮೂನ್ ಗೆ ಎಲ್ಲಿಗೆ ಹೋಗೋದು ಅಂತಾ ಪ್ಲ್ಯಾನ್ ಮಾಡ್ತಾರೆ. ಆದ್ರೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ನೀರಾರಿ ಕಿಶೋರ್ ಹಾಗೂ ಭವ್ಯಾ ದಂಪತಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಕಿಶೋರ್ ಹಾಗೂ ಭವ್ಯಾ ಕಳೆದ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿನ್ನೆ ದಂಪತಿ ರೆಂಜಿಲಾಡಿ ಗ್ರಾಮದ ಮೀನಾಡಿ ಶಾಲೆಯಲ್ಲಿ ಯುವ ಬ್ರೀಗೇಡ್ ಕಡಬ ವತಿಯಿಂದ ನಡೆದ ಸ್ವಚ್ಚತಾ ಹಾಗೂ ಶ್ರಮದಾನ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಸ್ವಚ್ಚತಾ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಯುವಬ್ರೀಗೇಡ್ ತಂಡ ಎರಡು ನಿನ್ನೆ ವಜ್ರ ಮಹೋತ್ಸವ ಸಂಭ್ರಮ ಹಿನ್ನೆಲೆ ಮೀನಾಡಿ ಶಾಲೆಯಲ್ಲಿ ಸ್ವಚ್ಚತಾ ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸಿದರು. ಈ ವೇಳೆ ನವದಂಪತಿ ಕೂಡ ಭಾಗಿಯಾಗಿದ್ದು ಗಮನ ಸೆಳೆಯಿತು. ಅಲ್ಲದೇ ಎಲ್ಲರೂ ರೀತಿಯ ಕೆಲಸಗಳಲ್ಲಿ ಭಾಗಿಯಾದ್ರೆ ಸಮಾಜದಲ್ಲಿ ಬದಲಾವಣೆ ಸಾಧ್ಯ ಅನ್ನೋ ಸಂದೇಶ ಸಾರಿದ್ರು.
- Advertisement -