Sunday, May 19, 2024
Homeತಾಜಾ ಸುದ್ದಿಬಂಡೀಪುರದಲ್ಲಿ ನಟ ಧನ್ವೀರ್ ರಾತ್ರಿ ಸಫಾರಿ- ಜನಸಾಮಾನ್ಯರಿಗೊಂದು ನ್ಯಾಯ ಸೆಲಬ್ರೆಟಿಗಳಿಗೊಂದು ನ್ಯಾಯ!..

ಬಂಡೀಪುರದಲ್ಲಿ ನಟ ಧನ್ವೀರ್ ರಾತ್ರಿ ಸಫಾರಿ- ಜನಸಾಮಾನ್ಯರಿಗೊಂದು ನ್ಯಾಯ ಸೆಲಬ್ರೆಟಿಗಳಿಗೊಂದು ನ್ಯಾಯ!..

spot_img
- Advertisement -
- Advertisement -

ಚಾಮರಾಜನಗರ: ಬಂಡೀಪುರದಲ್ಲಿ ನಟ ಧನ್ವೀರ್ ರಾತ್ರಿ ಸಫಾರಿ ಮಾಡಿದ್ದಾರೆ ಎನ್ನಲಾಗಿದೆ.ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರಾತ್ರಿ ಸಫಾರಿಗೆ ಅವಕಾಶ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಜೀಪ್ ನಲ್ಲಿ ನಟ ಹೀಗೆ ರೌಂಡ್ ಹೊಡೆದಿರುವುದು ಈಗ ಜನತೆಯ ಆಕ್ರೊಶಕ್ಕೆ ಕಾರಣವಾಗಿದ್ದು, ಸೆಲಬ್ರೆಟಿಗಳು ಅಂದ ಮಾತ್ರಕ್ಕೆ ಹೇಗೆ ಬೇಕೋ ಹಾಗೆ ವರ್ತಿಸಬಹುದೇ? ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ಸ್ವತಃ ಅವರೇ ಸ್ಟೇಟಸ್ ಹಾಕಿಕೊಂಡಿದ್ದಾರೆ.

ಈ ಕುರಿತು ಸಿಎಫ್‌ಒ ಬಾಲಚಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿ ‘ಅರಣ್ಯದೊಳಗೆ ರಾತ್ರಿ ಸಫಾರಿ ಮತ್ತು ರಾತ್ರಿ ಸಂಚಾರ ಕಾನೂನು ಬಾಹಿರವಾಗಿದ್ದರೂ ನಟ ಧನ್ವೀರ್ ತಮ್ಮ ಸ್ನೇಹಿತರೊಡಗೂಡಿ ರಾತ್ರಿ ಸಫಾರಿ ಮಾಡಿದ್ದಾರೆ ಎನ್ನಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.

- Advertisement -
spot_img

Latest News

error: Content is protected !!