- Advertisement -
- Advertisement -
ಹೊಸದಿಲ್ಲಿ : ಹಿಮಾಲಯ ಪರ್ವತ ಶ್ರೇಣಿಗೆ ಸಂಭಂದಿಸಿ ಹೊರಬಂದಿರುವ ಮಾಹಿತಿಯೊಂದು ಕೋಲಾಹಲ ಉಂಟುಮಾಡಿದೆ.ಭೂವೈಜ್ಞಾನಿಕ, ಐತಿಹಾಸಿಕ ಮತ್ತು ಭೂಭೌತಿಕ ದತ್ತಾಂಶಗಳನ್ನು ವಿಮರ್ಶಿಸುವ ಅಧ್ಯಯನವೊಂದರ ಪ್ರಕಾರ, ಇಡೀ ಹಿಮಾಲಯದ ಭೂಭಾಗವು ಬೃಹತ್ ಭೂಕಂಪ ಉಂಟಾಗಲಿದ್ದು, ಇದು 8 ರಷ್ಟು ರಿಕ್ಟರ್ ಮಾಪಕದಲ್ಲಿ ದಾಖಲಾಗುವಷ್ಟು ಇರಲಿದೆ ಎಂದು ಅಧ್ಯಯನವೊಂದು ಹೇಳಿದೆ.
ಹಿಮಾಲಯ ಶ್ರೇಣಿಯಲ್ಲಿ ಭಾರೀ ಪ್ರಮಾಣದಲ್ಲಿ ಭೂಕಂಪನ ಸಂಭವಿಸಲಿದೆ ಎನ್ನಲಾಗುತ್ತಿದೆ. ಈ ಮೂಲಕ ಹಿಮಾಲಯ ಪರ್ವತಗಳು ಕುಸಿಯುವ ಭೀತಿ ಉಂಟಾಗಿದೆ.ಹಿಂದಿನ ಕಂಪನಗಳಿಗೆ ಹೋಲಿಸಿದರೆ ಈ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕೇಂದ್ರೀಕೃತವಾಗಿ ಉಂಟಾಗಲಿರುವಂತ ಭೂಕಂಪನ, ಚಂಡೀಗಢ, ಡೆಹ್ರಾಡೂನ್, ಕಠ್ಮಂಡು, ನೇಪಾಳ ಸೇರಿದಂತೆ ರಾಷ್ಟ್ರ ರಾಜಧಾನಿ ದೆಹಲಿಯವರೆಗೆ ವ್ಯಾಪಿಸಲಿದೆ ಎಂಬುದಾಗಿ ಹೇಳಲಾಗಿದೆ. ಹೀಗಾಗಿ ಈ ಪ್ರದೇಶದ ಜನರಲ್ಲಿ ಇದೀಗ ಆತಂಕ, ಭೀತಿ ಉಂಟಾಗಿದೆ.
- Advertisement -