Sunday, May 5, 2024
Homeಕರಾವಳಿಉಡುಪಿಉಡುಪಿ: ಕಂಠಪೂರ್ತಿ ಕುಡಿದು ಬಸ್ಸನ್ನು ನಡುರಸ್ತೆಯಲ್ಲಿ ನಿಲ್ಲಿಸಿ ತೂರಾಡಿದ ಚಾಲಕ: ಡ್ರೈವರ್ ಬೇಜವಬ್ದಾರಿಗೆ ಸಾರ್ವಜನಿಕರಿಂದ ಸಿಕ್ತು...

ಉಡುಪಿ: ಕಂಠಪೂರ್ತಿ ಕುಡಿದು ಬಸ್ಸನ್ನು ನಡುರಸ್ತೆಯಲ್ಲಿ ನಿಲ್ಲಿಸಿ ತೂರಾಡಿದ ಚಾಲಕ: ಡ್ರೈವರ್ ಬೇಜವಬ್ದಾರಿಗೆ ಸಾರ್ವಜನಿಕರಿಂದ ಸಿಕ್ತು ಧರ್ಮದೇಟಿನ ಗೌರವ

spot_img
- Advertisement -
- Advertisement -

ಉಡುಪಿ: ಖಾಸಗಿ ಬಸ್ ಚಾಲಕನೊಬ್ಬ ಕಂಠಪೂರ್ತಿ ಕುಡಿದು ಬಸ್ ನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ರಸ್ತೆಯಲ್ಲೇ ತೂರಾಡಿ ಸಾರ್ವಜನಿಕರಿಂದ ಧರ್ಮದೇಟು ತಿಂದ ಘಟನೆ ಉಡುಪಿಯಲ್ಲಿ ನಡೆದಿದೆ. ಚಾಲಕ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉಡುಪಿ ಮೂಲದವನು ಎನ್ನಲಾದ ಬಸ್ ಚಾಲಕ ಮೊದಲೇ ಕುಡಿದುಕೊಂಡು ಬಸ್ ಚಾಲನೆಗೆ ಬಂದಿದ್ದು, ಬಳಿಕ ಬಸ್ಸನ್ನು ಮಧ್ಯರಾತ್ರಿ ರಸ್ತೆ ಮಧ್ಯೆ ವಿರಾಮಕ್ಕೆಂದು ನಿಲ್ಲಿಸಿದ್ದಾನೆ. ಈ ಸಂದರ್ಭ ಮತ್ತೆ ಕುಡಿದಿದ್ದು ದೇಹದ ನಿಯಂತ್ರಣ ಕಳೆದುಕೊಂಡಿದ್ದಾನೆ. ಅಲ್ಲದೇ ಓಲಾಡುತ್ತಾ ಮತ್ತೆ ಬಸ್ ಬಳಿ ಬಂದು ಚಾಲನೆಗಾಗಿ ಪ್ರಯತ್ನಿಸಿದ್ದಾನೆ.

ಈ ವೇಳೆ ಸ್ಥಳೀಯರು ಚಾಲಕನ ಅವಸ್ಥೆ ನೋಡಿ ಥಳಿಸಿದ್ದಾರೆ. ಮೊದಲೇ ದೇಹದ ನಿಯಂತ್ರಣ ಕಳೆದುಕೊಂಡಿದ್ದ ಚಾಲಕ ಹೆದ್ದಾರಿ ನಡುವೆಯೇ ಬಿದ್ದಿದ್ದಾನೆ. ಈ ಘಟನೆಯನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ವೈರಲ್ ಆಗುತ್ತಿದೆ. ಆದರೆ ಚಾಲಕನ ಹೆಸರು ಹಾಗೂ ಇತರ ಮಾಹಿತಿ ಲಭ್ಯವಾಗಿಲ್ಲ.

- Advertisement -
spot_img

Latest News

error: Content is protected !!