Thursday, April 24, 2025
Homeಕರಾವಳಿಕಾಸರಗೋಡುನೀಲೇಶ್ವರಂ ಪಟಾಕಿ ದುರಂತ ಪ್ರಕರಣ; ತನಿಖೆಗೆ ಎಸ್ ಐಟಿ ರಚಿಸಿದ ಕೇರಳ ಸರ್ಕಾರ

ನೀಲೇಶ್ವರಂ ಪಟಾಕಿ ದುರಂತ ಪ್ರಕರಣ; ತನಿಖೆಗೆ ಎಸ್ ಐಟಿ ರಚಿಸಿದ ಕೇರಳ ಸರ್ಕಾರ

spot_img
- Advertisement -
- Advertisement -

ಕಾಸರಗೋಡು: ನೀಲೇಶ್ವರಂನ ವೀರನ್ ಕಾವು ದೇವಸ್ಥಾನದಲ್ಲಿ ನಡೆದ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ.

ಇದೇ ವೇಳೆ, ದುರಂತದ ಕುರಿತು ಪ್ರತ್ಯೇಕ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಕಾಸರಗೋಡು ಜಿಲ್ಲಾ ಹೆಚ್ಚುವರಿ ವಿಭಾಗಾಧಿಕಾರಿಗೆ ಸೂಚನೆ‌ ನೀಡಲಾಗಿದ್ದು, ದೇವಸ್ಥಾನ ಆಡಳಿತ ಸಮಿತಿಯ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪೊಲೀಸರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಅವಘಡದ ಹಿನ್ನೆಲೆಯಲ್ಲಿ ದೇವಸ್ಥಾನದ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು,
ನೀಲೇಶ್ವರಂ ಪೊಲೀಸರು ಸ್ಫೋಟಕ ಸಾಮಾಗ್ರಿಗಳ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ.

ಪಟಾಕಿ ಸಿಡಿಸಲು ದೇವಸ್ಥಾನದ ವತಿಯಿಂದ ಅನುಮತಿ ಪಡೆದಿರಲಿಲ್ಲ ಎಂದು ಹೇಳಲಾಗಿದ್ದು, ದುರಂತದಲ್ಲಿ ಒಟ್ಟು 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

- Advertisement -
spot_img

Latest News

error: Content is protected !!