ಸುಳ್ಯ: ತಾಲೂಕಿನ ಕಾನೂನು ಸೇವಾ ಸಮಿತಿ ಸುಳ್ಯ, ವಕೀಲರ ಸಂಘ ಮತ್ತು ಅಭಿಯೋಜಕರ ಕಛೇರಿ ಸುಳ್ಯ, ಪೋಲೀಸ್ ಇಲಾಖೆ ಸುಳ್ಯ, ಬೆಳ್ಳಾರೆ ಸುಬ್ರ ಹ್ಮಣ್ಯ ಪೋಲೀಸ್ ಠಾಣೆ ಸುಳ್ಯ ಹಾಗೂ ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಕಾರ್ಯಕ್ರಮವು ಜೂ.25 ರಂದು ಸುಳ್ಯ ನ್ಯಾಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸುಳ್ಯ ಹಿರಿಯ ನ್ಯಾಯಾಧೀಶ ರಾದ ಸೋಮಶೇಖರ್ ಎ.ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಇಂದು ನ್ಯಾಯಾಲಯದಲ್ಲಿ ಸಿವಿಲ್ ಕೇಸ್ ಗಳು, ಕ್ರಿಮಿನಲ್ ಕೇಸ್ ಗಳನ್ನು ಬಗೆ ಹರಿಸಿಕೊಳ್ಳಲು ಒಳ್ಳೆಯ ದಿನ. ಪರಸ್ಪರ ಮೈಮನಸ್ಸುಗಳನ್ನು ದೂರವಿಟ್ಟು ಸಮಾಜದಲ್ಲಿ ಉತ್ತಮ ಜೀವನ ನಿರ್ವಹಿಸಲು ಕರೆ ನೀಡಿದರು.
ವೇದಿಕೆಯಲ್ಲಿ ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ನಾರಾಯಣ ಕೆ,ಹಿರಿಯ ವಕೀಲರು ಗಳಾದ ಕೆ ರವೀಂದ್ರನಾಥ ರೈ, ನಳಿನ್ ಕುಮಾರ್ ಕೋಡುಗುಳಿ ಉಪಸ್ಥಿತರಿದ್ದರು.
ಸುಳ್ಯ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಬಿ. ಜನಾರ್ಧನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಫಲಾನುಭವಿಗಳು ತಮ್ಮತಮ್ಮಪ್ರಕರಣ ಗಳನ್ನು ಇತ್ಯರ್ಥಪಡಿಸಿಕೊಳ್ಳಲು ಆಗಮಿಸಿದ್ದರು