- Advertisement -
- Advertisement -
ಉಡುಪಿ: ಹೆಬ್ರಿಯ ಶಿವಪುರದಲ್ಲಿ ನಡೆದ ಭೂ ಅವ್ಯವಹಾರದಲ್ಲಿ ಪ್ರಭಾವೀ ಸಚಿವರ ಕೈವಾಡ ಇದೆ ಎಂದು ಸಚಿವ ಸುನಿಲ್ ಕುಮಾರ್ ಹೆಸರು ಉಲ್ಲೇಖಿಸದೇ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದು ಇಂದು ಉಡುಪಿ ಜಿಲ್ಲಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಈ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಭ್ರಷ್ಟ ಸಚಿವರೊಬ್ಬರ ಕೈವಾಡದಿಂದಲೇ ಈ ಅವ್ಯವಹಾರ ನಡೆದಿದೆ. ಇದ್ರಿಂದ ಜಮೀನು ಕೊಟ್ಟ ರೈತರಿಗೆ ತುಂಬಾ ತೊಂದರೆಯಾಗಲಿದೆ. ಹಾಗಾಗಿ ಈ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.
- Advertisement -