- Advertisement -
- Advertisement -
ನವದೆಹಲಿ:ಇಲ್ಲಿನ ಶಾಹ್ದಾರಾದಲ್ಲಿ ಹೊಸ ವರ್ಷದ ಪಾರ್ಟಿಗೆ ಹಣ ಕೊಡಲಿಲ್ಲ ಎಂದುವರ್ಷದ ಅಪ್ರಾಪ್ತ ಬಾಲಕ ಸುತ್ತಿಗೆಯಿಂದ ಹೊಡೆದು ಅಜ್ಜಿಯನ್ನೇ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.ಸತೀಶ್ ಜಾಲಿ ಮೃತಮಹಿಳೆ ಈಕೆಯನ್ನು ಬಾಲಕನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಮೃತ ಮಹಿಳೆಯ ಮಗ ಸಂಜಯ್ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆಕೆಯ ಮನೆಯಲ್ಲಿದ್ದಾರೆ. ಇತರರು ಮನೆಯಲ್ಲಿ ಇಲ್ಲದ ವೇಳೆ ಮಹಿಳೆಯ ಮೊಮ್ಮಗ ಹೊಸ ವರ್ಷ ಪಾರ್ಟಿ ಮಾಡಬೇಕು ಹಣ ಕೊಡಿ ಎಂದು ಕೇಳಿದ್ದ, ಆದರೆ ಜಾಲಿ ನಿರಾಕರಿಸಿದ್ದರು. ಅದಕ್ಕೆ ಕೋಪಗೊಂಡು ಸುತ್ತಿಗೆಯಿಂದ ಹೊಡೆದು ಅವರನ್ನು ಹತ್ಯೆ ಮಾಡಿ 18 ಸಾವಿರ ಕದ್ದು ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
- Advertisement -