- Advertisement -
- Advertisement -
ಬೆಳ್ತಂಗಡಿ: ಇಲ್ಲಿನ ತಣ್ಣೀರುಪಂಥ ಮುಂಚೇರಿ ನಿವಾಸಿ, ಮಾದರಿ ಕೃಷಿಕ ಮಾಯಿಲಪ್ಪ ಗೌಡ ಮುಂಚೇರಿ ಇವರು ಇಂದು ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಶ್ರೀ ಗಣೇಶ ಭಜನಾ ಮಂಡಳಿ ಕುಪ್ಪೆಟ್ಟಿ ಯ ನೂತನ ಸಭಾಭವನದ ನಿರ್ಮಾಣದ ಸಂದರ್ಭದಲ್ಲಿ ಕೊಳವೆಬಾವಿ ತೆಗೆಸಿ ಕೊಟ್ಟಿದ್ದರು. ಇಂತಹ ಅನೇಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಮೃತರ ಅಗಲಿಕೆಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಮೃತರು ಕುಟುಂಬಸ್ಥರು ಹಾಗೂ ಬಂದು ಮಿತ್ರನ್ನು ಅಗಲಿದ್ದಾರೆ.
- Advertisement -