Friday, May 3, 2024
Homeಕರಾವಳಿಉಡುಪಿಕಾಂಗ್ರೆಸ್ ಭಾರತ್ ಜೋಡೋ  ಯಾತ್ರೆಯಲ್ಲಿ ಹಿಜಾಬ್ ಚೋಡೋ ಅಭಿಯಾನ ಮಾಡುವುದು ಉತ್ತಮ:ದ.ಕ. ಜಿಲ್ಲಾ ಉಸ್ತುವಾರಿ ಸಚಿವ...

ಕಾಂಗ್ರೆಸ್ ಭಾರತ್ ಜೋಡೋ  ಯಾತ್ರೆಯಲ್ಲಿ ಹಿಜಾಬ್ ಚೋಡೋ ಅಭಿಯಾನ ಮಾಡುವುದು ಉತ್ತಮ:ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿಕೆ

spot_img
- Advertisement -
- Advertisement -

ಬೆಂಗಳೂರು: ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ ತೀರ್ಪು ವಿಚಾರದಲ್ಲಿ ಮುಸ್ಲಿಮರು ಕೊಟ್ಟ ಅರ್ಜಿಗಳು ವಜಾ ಆಗಿದ್ದು, ಈಗಿರುವ ತೀರ್ಪು ಮುಂದುವರಿಯುತ್ತದೆ ಎಂದು ಸರ್ಕಾರ ಪುನರುಚ್ಚರಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.‌

ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಸುನೀಲ್ ಕುಮಾರ್, ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ತನಕ ಹೋಗುತ್ತಾರೆ ಅಂತಾದರೆ ಎಷ್ಟು ದೊಡ್ಡ ಷಡ್ಯಂತ್ರ ಇತ್ತು ಅಂತಾ ಗೊತ್ತಾಗುತ್ತದೆ, ಮತೀಯ ಶಕ್ತಿಗಳ ಬೆಂಬಲ ಎಷ್ಟರ ಮಟ್ಟಿಗೆ ಇತ್ತು ಎಂಬುದು ನಮಗೆ ಸ್ಪಷ್ಟ ಇದೆ ಎಂದು ಹೇಳಿದ್ದಾರೆ.

ಇನ್ನಾದರೂ ವಿದ್ಯಾರ್ಥಿಗಳು ಸರ್ಕಾರದ ನಿಯಮಗಳಿಗೆ ಬದ್ಧರಾಗಿ ಇರುವಂತೆ ಕಿವಿಮಾತು ಹೇಳುತ್ತೇನೆ ಎಂದು ತಿಳಿಸಿರುವ ಸುನೀಲ್ ಕುಮಾರ್, ಕಾಂಗ್ರೆಸ್ ಕೂಡಾ ಹಿಜಾಬ್ ಚೋಡೋ ಅಭಿಯಾನವನ್ನು ಭಾರತ್ ಜೋಡೋ ಅಭಿಯಾನದಲ್ಲಿ ಮಾಡುವುದು ಉತ್ತಮ ಎಂದು ನನಗೆ ಅನ್ನಿಸುತ್ತಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!