- Advertisement -
- Advertisement -
ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಯಕ್ಷಗಾನ ವೇಷ ತೊಟ್ಟು ಖುಷಿ ಪಟ್ಟಿದ್ದಾರೆ.
ನಿನ್ನೆ ರಾತ್ರಿ ಭಟ್ಕಳದಲ್ಲಿ ಯಕ್ಷಗಾನ ಬಯಲಾಟ ವೀಕ್ಷಿಸಿದ ಸಚಿವ ಸುಧಾಕರ್, ಯಕ್ಷಗಾನ ಮುಗಿದ ಬಳಿಕ ರಂಗಸ್ಥಳಕ್ಕೆ ಹೋಗಿ ವೇಷ ತೊಟ್ಟು ಖುಷಿ ಪಟ್ಟಿದ್ದಾರೆ.
ಭಟ್ಕಳ ಶಾಸಕ ಸುನಿಲ್ ನಾಯ್ಕ್ ನಿವಾಸದಲ್ಲಿ ನಡೆದ ಯಕ್ಷಗಾನ ಬಯಲಾಟ ಮುಗಿದ ಬಳಿಕ ಸಚಿವ ಸುಧಾಕರ್ ವೇಷ ಧರಿಸಿ ಫೋಸ್ ನೀಡಿದ್ದಾರೆ.
ಈ ವೇಳೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಭಟ್ಕಳ ಶಾಸಕ ಸುನೀಲ್ ನಾಯ್ಕ್ ಉಪಸ್ಥಿತರಿದ್ದರು.
- Advertisement -