- Advertisement -
- Advertisement -
ನೆಲ್ಯಾಡಿ: ತರಕಾರಿ ಸಾಗಾಟದ ಮಿನಿ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ತೊಡಿಗೆ ಬಿದ್ದ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪ ಮಣ್ಣಗುಂಡಿಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ.
ಹಾಸನ ಮೂಲದ ಈ ಟೆಂಪೋದಲ್ಲಿ ಪುತ್ತೂರಿಗೆ ತರಕಾರಿ ಸಾಗಾಟ ಮಾಡಲಾಗುತ್ತಿತ್ತು. ಅಪಘಾತದ ವೇಳೆ ನೆಲ್ಯಾಡಿ ಮೂಲದ ಡ್ರೈವರ್ ಒಬ್ಬರು ವಾಹನವನ್ನು ಚಾಲನೆ ಮಾಡುತ್ತಿದ್ದರು. ರಸ್ತೆಯ ತುಂಬೆಲ್ಲಾ ಇರುವ ಗುಂಡಿ ತಪ್ಪಿಸಲು ಹೋಗಿ ಈ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ಚಾಲಕರಿಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.
- Advertisement -