- Advertisement -
- Advertisement -
ಸುಳ್ಯ: ಕೂತ್ಕುಂಜ ಗ್ರಾಮದ ಕುಳ್ಳಾಜೆ ನಿವಾಸಿ ದಿ.ಚೆನ್ನ ನಾಯ್ಕರ ಪುತ್ರ ವಸಂತ (36 ವ.) ಮೇ. 9ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಲವು ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್ ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಮೇ.9 ರಂದು ರಾತ್ರಿ ಮನೆಯಲ್ಲಿ ವಿಷ ಸೇವಿಸಿದ್ದು, ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸಿ ಸ್ವಲ್ಪ ಹೊತ್ತಿನಲ್ಲಿ ಮೃತಪಟ್ಟಿದ್ದರು.
ಮೃತರು ತಾಯಿ ಶ್ರೀಮತಿ ನೀಲಮ್ಮ ಸಹೋದರರಾದ ಶಶಿಧರ, ರವಿಶಂಕರ, ಹರಿಶ್ಚಂದ್ರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
- Advertisement -