- Advertisement -
- Advertisement -
ಮಂಗಳೂರು; ನನ್ನ ಮಗನನ್ನು ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಸುಳ್ಯದ ಕಳಂಜದಲ್ಲಿ ಕೊಲೆಗೀಡಾದ ಮಸೂದ್ ತಾಯಿ ಸಾರಮ್ಮ ಆಗ್ರಹಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮಗ ನನ್ನ ಮನೆ ನಿರ್ವಹಿಸುತ್ತಿದ್ದ. ನನಗೆ ಈಗ ಯಾರು ಕೂಡ ಆಸರೆ ಇಲ್ಲದಂತಾಗಿದೆ. ನನ್ನ ಮಗನನ್ನು ರಾತ್ರಿ ಕರೆದುಕೊಂಡು ಹೋಗಿ ಹೊಡೆದು ಹಾಕಿದ್ದಾರೆ. ನನಗೆ ನನ್ನದೇ ಆದ ಮನೆ ಕೂಡ ಇಲ್ಲ. ಮಕ್ಕಳೆಲ್ಲಾ ಚಿಕ್ಕವರು. ದುಡಿಯುತ್ತಿದ್ದ ಮಗನನ್ನು ಕೊಂದು ಹಾಕಿದರು ಎಂದು ಕಣ್ಣೀರು ಹಾಕಿದ್ದಾರೆ.
- Advertisement -