Thursday, May 9, 2024
Homeಕರಾವಳಿಉಡುಪಿಕಡಬ; ತಾಳಿ ಕಟ್ಟುವ ವೇಳೆ ನನಗೆ ಈ ಹುಡ್ಗ ಬೇಡ ಎಂದ ವಧು: ಪ್ರಕರಣ ಪೊಲೀಸ್...

ಕಡಬ; ತಾಳಿ ಕಟ್ಟುವ ವೇಳೆ ನನಗೆ ಈ ಹುಡ್ಗ ಬೇಡ ಎಂದ ವಧು: ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಕೊನೆಗೆ ಆಗಿದ್ದೇನು?

spot_img
- Advertisement -
- Advertisement -

ಕಡಬ; ತಾಳಿ ಕಟ್ಟುವ ವೇಳೆ ನನಗೆ ಈ ಹುಡ್ಗ ಬೇಡ ಎಂದು ವಧು ಹೇಳಿದ ಕೊನೆಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ವಿವಾಹವೇ ಮುರಿದು ಬಿದ್ದ ಘಟನೆ ನಡೆದಿದೆ.

ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆಯ ಯುವಕನ ಜೊತೆ  ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಕಂಟ್ರಮಜಲು ಎಂಬಲ್ಲಿನ ಯುವತಿ ಜೊತೆ  ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಏ.26ರಂದು ವಿವಾಹ ನಡೆದು ಬಳಿಕ ಕೋಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟದ ವ್ಯವಸ್ಥೆ ಮಾಡಲಾಗಿತ್ತು.

ಆದರೆ  ಧಾರಾ ಮುಹೂರ್ತದ ವೇಳೆ ತಾಳಿ ಕಟ್ಟಲು ವಧು ನಿರಾಕರಿಸಿದ ಕಾರಣ ನಡೆಯಬೇಕಿದ್ದ ಮದುವೆ ಮುರಿದುಬಿದ್ದಿದೆ. ಆದರೆ ಕೊನೇ ಕ್ಷಣದಲ್ಲಿ ಮದುವೆ ನಿರಾಕರಿಸಲು ಕಾರಣವೇನು ಏನು ಅನ್ನೋದು ಗೊತ್ತಾಗಿಲ್ಲ. ಆದರೆ ಎರಡೂ ಕಡೆಯವರು ಭಗ್ನಗೊಂಡ ಕನಸಿನೊಂದಿಗೆ ನ್ಯಾಯಕ್ಕಾಗಿ ಉಪ್ಪಿನಂಗಡಿ ಠಾಣೆಯ ಮೆಟ್ಟಿಲೇರಿದ್ದಾರೆ. 

ಇನ್ನು ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು  ಆಗಿರುವ ತಪ್ಪಿಗೆಪಶ್ಚಾತಾಪ ಪಟ್ಟು ಉಮೇಶ ಅವರನ್ನು ಮದುವೆ ಆಗಲು ಒಪ್ಪಿಗೆ ಸೂಚಿಸಿದರೂ ಉಮೇಶ್‌ ಅವರು ನಿರಾಕರಿಸಿದರೆಂದು ಹೇಳಲಾಗಿದೆ. ಇದರಿಂದಾಗಿ ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.

ಇನ್ನುವರ ಉಮೇಶ್ ಅವರ ಮನೆಯಲ್ಲಿ ಮದುವೆ ಔತಣ ಕೂಟಕ್ಕೆ ಮಾಂಸಾಹಾರಿ ಊಟಕ್ಕೆ ಸಿದ್ಧತೆ ಮಾಡಲಾಗಿತ್ತು. ಸುಮಾರು 500 ಮಂದಿಗೆ ಊಟಕ್ಕೆ ಸಿದ್ಧತೆ ಮಾಡಲಾಗಿತ್ತು.ಕೊನೆ ಕ್ಷಣದಲ್ಲಿ ಯುವತಿ ಮದುವೆ ನಿರಾಕರಿಸಿದರಿಂದ ಎರಡೂ ಕಡೆಯವರಿಗೂ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ

- Advertisement -
spot_img

Latest News

error: Content is protected !!