- Advertisement -
- Advertisement -
ಮಂಜೇಶ್ವರ:ಕೆಲವು ದಿನಗಳ ಹಿಂದೆ ಮಂಜೇಶ್ವರದಲ್ಲಿ ನಡೆದ ಗದಗ ಮೂಲದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಹಾಗೂ ಆಕೆಯ ಪ್ರಿಯಕರನ ಬಂಧಿಸಲಾಗಿದೆ.ಪತ್ನಿ ಭಾಗ್ಯಶ್ರೀ (23) ಮತ್ತು ಆಕೆಯ ಪ್ರಿಯಕರ ಅಲ್ಲಾ ಪಾಷಾ (32) ಬಂಧಿತರು.
ಗದಗದ ಹನುಮಂತಪ್ಪ ತಲಪಾಡಿಯ ದೇವಿಪುರದಲ್ಲಿ ವಾಸವಾಗಿದ್ದ ಈತನ ಮೃತದೇಹವು ನವಂಬರ್ 5 ರಂದು ಕುಂಜತ್ತೂರು ಪದವಿನ ರಸ್ತೆ ಬದಿ ಪತ್ತೆಯಾಗಿತ್ತು. ಕತ್ತು ಹಿಸುಕಿ ಕೊಲೆಗೈದು ಕೊಲೆಯನ್ನು ಅಪಘಾತ ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತು.ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
- Advertisement -