Wednesday, June 24, 2026
Homeಅಪರಾಧಮಂಗಳೂರು; ಸ್ಕೂಟರ್ ಗೆ ಸಿಟಿ ಬಸ್‌ ಢಿಕ್ಕಿ ಪ್ರಕರಣ; ಹಿಂಬದಿ ಸವಾರೆ ಸಾವಿಗೆ ಸ್ಥಳೀಯರಿಂದ ಆಕ್ರೋಶ;...

ಮಂಗಳೂರು; ಸ್ಕೂಟರ್ ಗೆ ಸಿಟಿ ಬಸ್‌ ಢಿಕ್ಕಿ ಪ್ರಕರಣ; ಹಿಂಬದಿ ಸವಾರೆ ಸಾವಿಗೆ ಸ್ಥಳೀಯರಿಂದ ಆಕ್ರೋಶ; ಮೃತದೇಹದ ಜೊತೆಗೆ ಪ್ರತಿಭಟನೆ

- Advertisement -
- Advertisement -

ಮಂಗಳೂರಿನ ನಂತೂರು ವೃತ್ತದ ಬಳಿ ಸ್ಕೂಟರ್ ಗೆ ಸಿಟಿ ಬಸ್‌ ಢಿಕ್ಕಿಯಾಗಿ ಹಿಂಬದಿ ಸವಾರೆವಾರೆಯಾಗಿದ್ದ ಯುವತಿಯ ಮೇಲೆ ಬಸ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಯುವತಿಯ ಮೃತದೇಹವನ್ನು ತಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಮೃತಪಟ್ಟವರು ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಎನ್ನಲಾಗಿದೆ.

ಇದೀಗ ಯುವತಿಯ ಸಾವಿಗೆ ನ್ಯಾಯ ಒದಗಿಸುವಂತೆ ಸ್ಥಳೀಯರಿಂದ ಪ್ರತಿಭಟನೆ ನಡೆಯುತ್ತಿದ್ದು, ಯುವತಿಯ ಮೃದೇಹವನ್ನಿಟ್ಟುಕೊಂಡು ತಂದು ಸ್ಥಳೀಯರು ರಸ್ತೆ ತಡೆಯುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!