- Advertisement -
- Advertisement -
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಕಛೇರಿಯಲ್ಲಿ ಡಿಎಸ್ಬಿ ವಿಭಾಗದಲ್ಲಿ ಇನ್ಸ್ಪೆಕ್ಟರ್ ಅಗಿದ್ದ ರವಿ.ಬಿ.ಎಸ್ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಶೃಂಗೇರಿ ಪೊಲೀಸ್ ಠಾಣೆ ಪಿಐ ಪೊಲೀಸ್ ಠಾಣೆಯಾಗಿದ್ದು ಅಲ್ಲಿ ಕರ್ತವ್ಯ ನಿರ್ವಹಿಸಲ್ಲಿದ್ದಾರೆ.
ರವಿ.ಬಿ.ಎಸ್ ಈ ಹಿಂದೆ ಜಿಲ್ಲೆಯ ಹಲವು ಠಾಣೆಯಲ್ಲಿ ಕರ್ತವ್ಯ ಮಾಡಿದ್ದು, ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಅಗಿದ್ದರು. ನಂತರ ಇನ್ಸ್ಪೆಕ್ಟರ್ ಅಗಿ ಬಡ್ತಿ ಹೊಂದಿ ಮಂಗಳೂರು ಮಹಿಳಾ ಠಾಣೆಯಲ್ಲಿ ಕೆಲ ತಿಂಗಳು ಕರ್ತವ್ಯ ಮಾಡಿ ಅಲ್ಲಿಂದ ಎಸ್ಪಿ ಕಛೇರಿಯಲ್ಲಿ ಡಿಎಸ್ಬಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
- Advertisement -