Friday, May 3, 2024
Homeಕೊಡಗುಮಡಿಕೇರಿ: ಸ್ನೇಹಿತರೊಂದಿಗೆ ತೆರಳಿದ ಯುವಕ ಗುಂಡೇಟಿಗೆ ಬಲಿ

ಮಡಿಕೇರಿ: ಸ್ನೇಹಿತರೊಂದಿಗೆ ತೆರಳಿದ ಯುವಕ ಗುಂಡೇಟಿಗೆ ಬಲಿ

spot_img
- Advertisement -
- Advertisement -

ಮಡಿಕೇರಿ; ಸ್ನೇಹಿತರೊಂದಿಗೆ ಬೇಟೆಗೆ ತೆರಳಿದ ಯುವಕನೊಬ್ಬ ಗುಂಡೇಟಿಗೆ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿ . ವಿರಾಜಪೇಟೆ ತಾಲೂಕಿನ ಗುಂಡಿಕೆರೆ ನಿವಾಸಿ ಹಮೀದ್ (33) ಗುಂಡೇಟಿಗೆ ಬಲಿಯಾದ ಯುವಕ.

ಹಮೀದ್, ಅಶ್ರಫ್ ಹಾಗೂ ರಫೀಕ್ ಹೆಗ್ಗಳ ಗ್ರಾಮದ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ತೆರಳಿದ್ದರು. ಈ ವೇಳೆ ಹಮೀದ್ ಅವರಿಗೆ ಆಕಸ್ಮಿಕವಾಗಿ ಗುಂಡು ತಗುಲಿದೆ. ಜೊತೆಯಲ್ಲಿ ತೆರಳಿದ್ದ ಅಶ್ರಫ್ ಹಾಗೂ ರಫೀಕ್ ಪೊಲೀಸರಿಗೆ ಶರಣಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಹಮೀದ್ ಕುಟುಂಬಸ್ಥರು ಈ‌ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಈ ಕುರಿತು ಸತ್ಯಾಸತ್ಯತೆ ತನಿಖೆಯಿಂದಲೇ‌ ಹೊರಬರಬೇಕಿದೆ.

- Advertisement -
spot_img

Latest News

error: Content is protected !!