- Advertisement -
- Advertisement -
ಮಡಿಕೇರಿ; ಸ್ನೇಹಿತರೊಂದಿಗೆ ಬೇಟೆಗೆ ತೆರಳಿದ ಯುವಕನೊಬ್ಬ ಗುಂಡೇಟಿಗೆ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿ . ವಿರಾಜಪೇಟೆ ತಾಲೂಕಿನ ಗುಂಡಿಕೆರೆ ನಿವಾಸಿ ಹಮೀದ್ (33) ಗುಂಡೇಟಿಗೆ ಬಲಿಯಾದ ಯುವಕ.
ಹಮೀದ್, ಅಶ್ರಫ್ ಹಾಗೂ ರಫೀಕ್ ಹೆಗ್ಗಳ ಗ್ರಾಮದ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ತೆರಳಿದ್ದರು. ಈ ವೇಳೆ ಹಮೀದ್ ಅವರಿಗೆ ಆಕಸ್ಮಿಕವಾಗಿ ಗುಂಡು ತಗುಲಿದೆ. ಜೊತೆಯಲ್ಲಿ ತೆರಳಿದ್ದ ಅಶ್ರಫ್ ಹಾಗೂ ರಫೀಕ್ ಪೊಲೀಸರಿಗೆ ಶರಣಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಹಮೀದ್ ಕುಟುಂಬಸ್ಥರು ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಈ ಕುರಿತು ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಿದೆ.
- Advertisement -